Advertisement

ರಾಜ್ಯಾದ್ಯಂತ ಕಂಬಳದ ಪರ ಹೋರಾಟ ತೀವ್ರ; ಪ್ರತಿಭಟನೆಗೆ ತಮಿಳರ ಸಾಥ್

12:19 PM Jan 27, 2017 | Team Udayavani |

ಬೆಂಗಳೂರು/ಮಂಗಳೂರು:ಕರಾವಳಿಯ ಸಾಂಸ್ಕೃತಿಕ ಕ್ರೀಡೆಯಾದ ಕಂಬಳದ ಪರ ಹೋರಾಟ ರಾಜ್ಯಾದ್ಯಂತ ತೀವ್ರಗೊಂಡಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆ ಕಂಬಳದ ಪರ ಹಕ್ಕೊತ್ತಾಯ ಹೆಚ್ಚತೊಡಗಿದೆ. ಏತನ್ಮಧ್ಯೆ ಕಂಬಳಕ್ಕಾಗಿ ಬೆಂಗಳೂರಲ್ಲಿ ತಮಿಳರು ಕೂಡಾ ಹೋರಾಟಕ್ಕಿಳಿದಿರುವುದು ವಿಶೇಷವಾಗಿದೆ.

Advertisement

ಶನಿವಾರ ಮೂಡಬಿದ್ರೆಯಲ್ಲಿ ಕಂಬಳದ ಪರವಾಗಿ ನಡೆಯಲಿರುವ ಬೃಹತ್ ಹಕ್ಕೊತ್ತಾಯ ಸಭೆಯ ಪೂರ್ವಭಾವಿಯಾಗಿ ಶುಕ್ರವಾರ ಬೆಂಗಳೂರಿನಲ್ಲಿ ಪ್ರವೀಣ್ ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೆಬ್ಬಾಳದಿಂದ ವಿಧಾನಸೌಧದವರೆಗೆ ಮಾನವ ಸರಪಳಿ ನಿರ್ಮಿಸಿದರು.

ನಗರದ ಮೌರ್ಯ ಸರ್ಕಲ್ ನಲ್ಲಿ ಎಐಎಡಿಎಂಕೆ ಕಾರ್ಯಕರ್ತರು ಕಂಬಳಕ್ಕಾಗಿ ಪ್ರತಿಭಟನೆ ನಡೆಸಿ, ತಮಿಳುನಾಡಿನಲ್ಲಿ ಜಲ್ಲಿಕಟ್ಟುಗೆ ಅವಕಾಶ ಮಾಡಿಕೊಟ್ಟಂತೆ, ಕರಾವಳಿ ಭಾಗದ ಕಂಬಳಕ್ಕೂ ಅದೇ ರೀತಿ ಅವಕಾಶ ನೀಡಬೇಕೆಂದು ಆಗ್ರಹಿಸಿದೆ.

ಮಂಗಳೂರಿನಲ್ಲಿ ವಿದ್ಯಾರ್ಥಿಗಳು, ಸಾಹಿತಿಗಳು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆ ನಡೆಸಿ, ಕಂಬಳದ ಮೇಲಿನ ನಿಷೇಧ ತೆರವುಗೊಳಿಸುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next