Advertisement

ಸ್ವಗ್ರಾಮಕ್ಕೆ ವಾಪಸ್ಸಾದ ಎಲ್ಲರಿಗೂ ಕ್ವಾರಂಟೈನ್‌ ಕಡ್ದಾಯ: ಸಚಿವ ಚವ್ಹಾಣ

01:33 PM May 17, 2020 | Naveen |

ಕಮಲನಗರ: ಬೇರೆ ಜಿಲ್ಲೆ, ರಾಜ್ಯಗಳಿಂದ ಆಗಮಿಸಿದ ಜನರು ಕ್ವಾರಂಟೈನ್‌ ನಿಯಮ ಪಾಲಿಸುವ ಮೂಲಕ ಕಡ್ಡಾಯವಾಗಿ ಮಾಸ್ಕ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ಪಟ್ಟಣದ ಚನ್ನಬಸವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿದ ಫಿವರ್‌ ಕ್ಲಿನಿಕ್‌ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಹೊರ ರಾಜ್ಯ, ಜಿಲ್ಲೆಯಿಂದ ಬಂದ ಜನರೊಂದಿಗೆ ಅವರು ಮಾತನಾಡಿದರು. ಹೊರ ರಾಜ್ಯ-ಜಿಲ್ಲೆಯಿಂದ ಆಗಮಿಸಿದ ಜನರು ಕಡ್ಡಾಯವಾಗಿ ಪಟ್ಟಣದ ಚನ್ನಬಸವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿದ ಫಿವರ್‌ ಕ್ಲಿನಿಕ್‌ನಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ನಂತರ ತಮ್ಮ ಸ್ವಗ್ರಾಮಕ್ಕೆ ತೆರಳಬೇಕು. ಸರ್ಕಾರದ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನಂತರ ಕಮಲನಗರ ಪಟ್ಟಣದ ವಿಶ್ವಾಸನಗರ ಬಡಾವಣೆಯಲ್ಲಿರುವ ಎಸ್‌.ಸಿ, ಎಸ್‌.ಟಿ., ಹಿಂದುಳಿದ ವರ್ಗದ ವಸತಿ ನಿಲಯ, ಕಮಲನಗರ ಚೇಕ್‌ಪೋಸ್ಟ್‌ಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದರು. ತಾಪಂ ಇಒ ಮಾಣಿಕರಾವ್‌ ಪಾಟೀಲ್‌, ತಹಶೀಲ್ದಾರರಾದ ಎಂ. ಚಂದ್ರಶೇಖರ, ರಮೇಶ ಪೇದ್ದೆ, ತಾಲೂಕು ವೈದ್ಯಾಧಿಕಾರಿ ಡಾ. ಶರಣಯ್ನಾ ಸ್ವಾಮಿ, ಶಿವಾನಂದ ಔರಾದೆ, ಅನೀಲಕುಮಾರ ರಾಯಪಳ್ಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next