Advertisement

ಕಲ್ಲಡ್ಕ:ಯುವಕನಿಗೆ ಇರಿತ,ಉದ್ವಿಗ್ನ ವಾತಾವರಣ, ಅಂಗಡಿ ಮುಂಗಟ್ಟು ಬಂದ್‌

04:35 PM May 26, 2017 | |

ಬಂಟ್ವಾಳ: ಇಲ್ಲಿನ ಕಲ್ಲಡ್ಕದಲ್ಲಿ ಶುಕ್ರವಾರ ಮಧ್ಯಾಹ್ನ ಯುವಕನೊಬ್ಬನಿಗೆ ವ್ಯಕ್ತಿಯೊಬ್ಬ ಇರಿದು ಪರಾರಿಯಾಗಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. 

Advertisement

ಮಹಮದ್‌ ಶಾಹಿರ್‌ ಎಂಬ ಯುವಕ ನಮಾಝ್ ಮುಗಿಸಿ ಬರುತ್ತಿದ್ದ ವೇಳೆ  ಕಾರಿನಲ್ಲಿ ಬಂದ ಅಪರಿಚಿತ ಯುವಕ ಇರಿದು ಪರಾರಿಯಾಗಿದ್ದಾನೆ. ಶಾಹಿರ್‌ನನ್ನು ತುಂಬೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಹನ ರಸ್ತೆಗೆ ಅಡ್ಡವಾಗಿಟ್ಟ ವಿಚಾರದಲ್ಲಿ ಗಲಾಟೆ ನಡೆದು ಮಾತಿಗೆ ಮಾತು ಬೆಳೆದು ಇರಿತ ನಡೆಸಲಾಗಿದೆ ಎಂದು ವರದಿಯಾಗಿದೆ.

ಕೋಮುಸೂಕ್ಷ್ಮ ಕಲ್ಲಡ್ಕದಲ್ಲಿ ಘಟನೆಯ ಬಳಿಕ ಅಂಗಡಿ ಮುಂಗಟ್ಟುಗಳನ್ನು ಮುಂಜಾಗೃತಾ ಕ್ರಮವಾಗಿ ಮುಚ್ಚಲಾಗಿದೆ. ವಾಹನ ಸಂಚಾರ ಎಂದಿನಂತೆ ಇದೆ. ಹೆದ್ದಾರಿಯಲ್ಲಿ ಸಂಚಾರ ಎಂದಿನಂತೆ ಇದೆ.

ಬಂಟ್ವಾಳ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ, ಬಿಗಿ ಭದ್ರತೆ ಕೈಗೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next