Advertisement

ಕಲ್ಲಡ್ಕ: ಕಾರಿನ ಸೀಟಿನಲ್ಲಿ ಮಲಗಿದ್ದ ವ್ಯಕ್ತಿ ಸಾವು

08:29 PM Mar 13, 2023 | Team Udayavani |

ಬಂಟ್ವಾಳ, ಮಾ. 13: ಕಾರು ಚಲಾಯಿಸಿ ಆಯಾಸಗೊಂಡು ಸೀಟಿನಲ್ಲಿ ಕುಳಿತು ನಿದ್ದೆ ಮಾಡುತ್ತಿದ್ದ ವ್ಯಕ್ತಿಯೋರ್ವ ಅಲ್ಲೇ ಮೃತಪಟ್ಟ ಘಟನೆ ಮಾ. 12ರಂದು ಕಲ್ಲಡ್ಕದಲ್ಲಿ ನಡೆದಿದೆ.
ಗೋಳ್ತಮಜಲು ಗ್ರಾಮದ ಹೊಸೈಮಾರ್‌ ನಿವಾಸಿ ಜಗದೀಶ್‌ ಮೃತಪಟ್ಟವರು. ಅವರು ವೀಡಿಯೋಗ್ರಾಫರ್‌ ಹಾಗೂ ಚಾಲಕರಾಗಿ ವೃತ್ತಿ ನಿರ್ವಹಿಸುತ್ತಿದ್ದು, ಸಂಬಂಧಿಕರ ಜತೆ ತರವಾಡು ಮನೆಯಲ್ಲಿ ನಡೆದ ದೈವದ ಕಾರ್ಯ ಮುಗಿಸಿ ಮಧ್ಯಾಹ್ನ ಹಿಂದಿರುಗಿ ಬರುತ್ತಿದ್ದ ವೇಳೆ ಕಲ್ಲಡ್ಕ ತಲುಪುತ್ತಿದ್ದಂತೆ ತಾನು ಆಯಾಸಗೊಂಡಿದ್ದು, ಕಾರಿನಲ್ಲೇ ಮಲಗುತ್ತೇನೆ ಎಂದಿದ್ದಾರೆ. ಬಳಿಕ ಸಂಬಂಧಿಕರು ಬೇರೆ ವಾಹನದ ಮೂಲಕ ಮನೆಗೆ ಬಂದಿದ್ದಾರೆ.
ಆದರೆ ಜಗದೀಶ್‌ ಅವರು ರಾತ್ರಿ 7 ಗಂಟೆ ಕಳೆದರೂ ಮನೆಗೆ ಬಾರದೇ ಇರುವ ಕುರಿತು ಕಲ್ಲಡ್ಕಕ್ಕೆ ಬಂದು ನೋಡಿದಾಗ ಅವರು ಕಾರಿನಲ್ಲೇ ಮಲಗಿದ್ದರು. ಬಳಿಕ ಡೋರ್‌ ತೆಗೆದು ನೋಡಿದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕಾರಿನ ಗಾಜುಗಳು ಪೂರ್ತಿ ಹಾಕಿಕೊಂಡಿದ್ದು, ಹೀಗಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೋ ಅಥವಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೋ ಎಂದು ತಿಳಿದುಬಂದಿಲ್ಲ. ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next