Advertisement

ಖರ್ಗೆ ವಿಪಕ್ಷ ನಾಯಕ : ಕಾಂಗ್ರೆಸ್‌ಹರ್ಷ

03:38 PM Feb 14, 2021 | Team Udayavani |

ಶಹಾಬಾದ: ರಾಜ್ಯಸಭೆ ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಕ ಮಾಡಿದ್ದಕ್ಕೆ ಶನಿವಾರ ನಗರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಮಜ್ಜಿದ್‌ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ವಿಜಯಕುಮಾರ ರಾಮಕೃಷ್ಣ, ರಾಜ್ಯಸಭೆಯಲ್ಲಿ ಮೋದಿ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತುವವರು ಯಾರಾದರೂ ಇದ್ದರೆ ಅವರೇ ಮಲ್ಲಿಕಾರ್ಜುನ ಖರ್ಗೆ. ರಾಜಕೀಯವಾಗಿ ಅಪಾರ ಅನುಭವ ಹೊಂದಿರುವ ಅವರು ಪಕ್ಷ ನೀಡಿದ ಜವಾಬ್ದಾರಿಯನ್ನು ಅನುಭವ ಹಾಗೂ ತಮ್ಮ ವಾಕ್‌ಚಾತುರ್ಯ ಮೂಲಕ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಸರ್ಕಾರದ ತಪ್ಪು ನಡೆಗಳ ವಿರುದ್ಧ
ಚಾಟಿ ಬೀಸುವ ಏಕೈಕ ನಾಯಕ ಅವರಾಗಿದ್ದಾರೆ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ| ರಶೀದ್‌ ಮರ್ಚಂಟ್‌, ಉಪಾಧ್ಯಕ್ಷ ವಿಜಯಕುಮಾರ ಮುಟ್ಟತ್ತಿ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ, ಮೃತ್ಯುಂಜಯ ಹಿರೇಮಠ, ಹಾಷಮ್‌ಖಾನ್‌, ಅಜೀತ್‌ ಪಾಟೀಲ,
ಶರಣಗೌಡ ಪಾಟೀಲ ಗೋಳಾ, ಸುಭಾಷ ಪವಾರ, ಸುಭಾಷ ಪಂಚಾಳ, ಮಾಣಿಕ್‌ಗೌಡ, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ,
ಸಾಹೇಬಗೌಡ ಬೋಗುಂಡಿ, ರಾಜೇಶ ಯನಗುಂಟಿಕರ್‌, ಅನ್ವರ್‌ ಪಾಶಾ, ಕುಮಾರ ಚವ್ಹಾಣ, ಡಾ| ಅಹ್ಮದ್‌ ಪಟೇಲ್‌, ಯುವ ಕಾಂಗ್ರೆಸ್‌
ಅಧ್ಯಕ್ಷ ಕಿರಣಕುಮಾರ ಚವ್ಹಾಣ, ದೇವೇಂದ್ರ ಕಾರೊಳ್ಳಿ, ಸ್ನೇಹಲ್‌ ಜಾಯಿ, ಶರಣಗೌಡ ಪಾಟೀಲ ದಳಪತಿ, ಸುರೇಶ ನಾಯಕ, ನಾಗಣ್ಣ ರಾಂಪೂರೆ ಹಾಗೂ ಕಾರ್ಯಕರ್ತರು ಇದ್ದರು.

ಓದಿ : ಯಾರಿಗೂ ಸಂಶಯ ಬೇಡ, ಮೀಸಲಾತಿ ಬಗ್ಗೆ ಸೂಕ್ತ ನಿರ್ಧಾರ: ಸಿಎಂ ಯಡಿಯೂರಪ್ಪ

Advertisement

Udayavani is now on Telegram. Click here to join our channel and stay updated with the latest news.

Next