Advertisement

ಕಲಬುರಗಿ: ಹಾಡಹಗಲೇ ದುಷ್ಕರ್ಮಿಗಳಿಂದ ಮಾಜಿ MLC ಪುತ್ರನಿಗೆ ಸೇರಿದ 3.50 ಲಕ್ಷ ಹಣ‌ ಲೂಟಿ

08:28 PM Jun 29, 2021 | Team Udayavani |

ಕಲಬುರಗಿ: ಕಾಂಗ್ರೆಸ್ ಮುಖಂಡರಾದ ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರ ಪುತ್ರ ಜಯಪ್ರಕಾಶ ಕಮಕನೂರ ಅವರಿಗೆ ಸೇರಿದ 3.50 ಲಕ್ಷ ರೂ. ನಗದು ಹಣವನ್ನು ದುಷ್ಕರ್ಮಿಗಳು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ನಗರದ ಸೂಪರ್ ಮಾರ್ಕೆಟ್ ನ ಮುಖ್ಯರಸ್ತೆಯ ವಾದಿರಾಜ ಭವನದ ಹತ್ತಿರ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.‌

ಜಯಪ್ರಕಾಶ ಎಕ್ಸಿಸ್ ಬ್ಯಾಂಕ್ ನಿಂದ 3.50 ಲಕ್ಷ ರೂಪಾಯಿ ನಗದು ಡ್ರಾ ಮಾಡಿಕೊಂಡು ಬಂದು ಬುಲೆರೋ ವಾಹನದಲ್ಲಿರಿಸಿದ್ದರು. ನಂತರ ಚಾಲಕನನ್ನು ವಾಹನದ ಬಳಿಯೇ ಇರಲು ಹೇಳಿ ಬೇರೆಡೆ ಹೋಗಿದ್ದರು.

ಈ ವೇಳೆ ಬೈಕ್ ಮೇಲೆ ಬಂದ ನಾಲ್ವರು ಖದೀಮರು ಚಾಲಕನ ಮೈಮೇಲೆ ಕೆಂಪು ಬಣ್ಣದ ದ್ರವ ಎಚರಿ ರಕ್ತ ಬಿದ್ದಿದೆ ನೋಡಿ ಎಂದು ಹೇಳಿ ಆತನ ಗಮನವನ್ನು ಬೇರೆಡೆ ಸೆಳೆದಿದ್ದಾರೆ. ಅಷ್ಟರಲ್ಲೇ ಬುಲೆರೋ ವಾಹನದಲ್ಲಿದ್ದ ಹಣದ ಬ್ಯಾಗ್ ನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ :ಹೊರಗುತ್ತಿಗೆ ಸಿಬ್ಬಂದಿಗೆ ನಿಯಮಿತವಾಗಿ ವೇತನ ನೀಡದಿದ್ದರೆ ಶಿಸ್ತುಕ್ರಮ : ಸಚಿವ ಸುಧಾಕರ್‌

Advertisement

ಹಾಡಹಗಲೇ ನಡೆದ ಈ ಘಟನೆಯಿಂದ ಚಾಲಕ ಸೇರಿದಂತೆ ಅಲ್ಲಿದ್ದ ಜನ ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next