Advertisement

ಕಳತ್ತೂರು: ಅಣ್ಣ ನನ್ನನ್ನು ಕರೆಯುತ್ತಿದ್ದಾನೆ ಎಂದು ಬಾವಿಗೆ ಹಾರಿ ಯುವಕ ಆತ್ಮಹತ್ಯೆ

09:40 PM Nov 20, 2022 | Team Udayavani |

ಶಿರ್ವ : ವಿಪರೀತ ಕುಡಿತದ ಚಟ ಹೊಂದಿದ್ದ ಯುವಕ ಕಳತ್ತೂರು ಶಾಂತಿಗುಡ್ಡೆ ರೈಸ್ ಮಿಲ್ ‌ಬಳಿಯ ದರ್ಕಾಸ್ ನಿವಾಸಿ ಸಚಿನ್ ಮೂಲ್ಯ(29)ನ.20 ರಂದು ತನ್ನ ಮನೆ ಸಮೀಪದ ನೆರೆಮನೆಯವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಸುಮಾರು 4 ವರ್ಷದ ಹಿಂದೆ ಈತನ ಅಣ್ಣನೂ ಇದೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅಣ್ಣ ನನ್ನನ್ನು ಕರೆಯುತ್ತಿದ್ದಾನೆ ನಾನು ಬಾವಿಗೆ ಹಾರುತ್ತೇನೆ ಎಂದು ಮನೆಯವರಲ್ಲಿ ಹೇಳಿ ಸಂಜೆ 4-30ರ ವೇಳೆಗೆ ಬಾವಿಗೆ ಹಾರಿದ್ದಾನೆ.

ಆಳವಾದ ಬಾವಿಯಲ್ಲಿ ಸುಮಾರು 25 ಅಡಿ ನೀರಿದ್ದು ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಹಾಗೂ ದೆಂದೂರಿನ ಅಶೋಕ್ ಶೆಟ್ಟಿ ಮತ್ತು ತಂಡ ಮೃತ ದೇಹವನ್ನು ರಾತ್ರಿ ಬಾವಿಯಿಂದ ಮೇಲಕ್ಕೆತ್ತಿದ್ದು ಉಡುಪಿಯ ಶವಾಗಾರದಲ್ಲಿಡಲಾಗಿದೆ.

ಶಿರ್ವ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸಿನೆಮಾ ಕ್ಷೇತ್ರದಲ್ಲೂ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡೋಣ: ಸಚಿವ ಅನುರಾಗ ಠಾಕೂರ್

Advertisement
Advertisement

Udayavani is now on Telegram. Click here to join our channel and stay updated with the latest news.

Next