Advertisement

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

01:34 PM Jun 01, 2023 | Team Udayavani |

ಚಿಕ್ಕಮಗಳೂರು: “ವೈದ್ಯೋ ನಾರಾಯಣೋ ಹರಿಃ” ಎಂಬ ಮಾತಿಗೆ. ಆದರೆ ತನ್ನ ಬಳಿ ಚಿಕಿತ್ಸೆಗೆಂದು ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಬೇಕಾದ ವೈದ್ಯರೊಬ್ಬರು ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

Advertisement

ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡದಿದೆ. ವೈದ್ಯ ಬಾಲಕೃಷ್ಣ ಅವರು ಕಂಠಪೂರ್ತಿ ಕುಡಿದು ಆಸ್ಪತ್ರೆಯ ಬೆಡ್ ನಲ್ಲಿ ಮಲಗಿದ್ದಾರೆ.

ಇದನ್ನೂ ಓದಿ:ಫೇಸ್‌ಬುಕ್‌ನಲ್ಲಿ ಪೀಠೊಪಕರಣ ಮಾರಲು ಹೋದ ವ್ಯಕ್ತಿಗೆ 98 ಸಾವಿರ ರೂ. ವಂಚನೆ

ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಆಪರೇಷನ್ ಕ್ಯಾಂಪ್ ಏರ್ಪಾಡು ಮಾಡಲಾಗಿತ್ತು. ಮಹಿಳೆಯರಿಗೆ ಬೆಳಗ್ಗೆ 8 ಗಂಟೆಗೆ ಬರಲು ಹೇಳಿದ್ದರು. 10ಕ್ಕೂ ಹೆಚ್ಚು ಮಹಿಳೆಯರು ಮಕ್ಕಳನ್ನ ಬಿಟ್ಟು ಬೆಳಗ್ಗೆ 8 ಗಂಟೆಗೆ ಬಂದಿದ್ದರು. ಆದರೆ 8 ಗಂಟೆಗೆ ಬರಬೇಕಾಗಿದ್ದ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ ಬಂದಿದ್ದು 3 ಗಂಟೆಗೆ. ಬರುವಾಗಲೇ ವೈದ್ಯ ಬಾಲಕೃಷ್ಣ ಕಂಠಪೂರ್ತಿ ಕುಡಿದು ಬಂದು ಸಂತಾನಹರಣ ಚಿಕಿತ್ಸೆ ಮಾಡಬೇಕಾದ ಆಪರೇಷನ್ ಹಾಸಿಗೆ ಮೇಲೆ ಮಲಗಿದ್ದಾರೆ.

ಇದನ್ನು ಅನಸ್ತೇಸಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರ ಸಂಬಂಧಿಗಳು ಸಿಟ್ಟಾಗಿದ್ದು, ವೈದ್ಯರ ವಿರುದ್ಧ ಕೂಗಾಡಿದ್ದಾರೆ.

Advertisement

ಸಿಬ್ಬಂದಿ ಡ್ರಾಮಾ: ಕುಡಿದು ಬಂದ ವೈದ್ಯರಿಗೆ ಶುಗರ್ ನಾಟಕವಾಡಿದ ಆಸ್ಪತ್ರೆ ಸಿಬ್ಬಂದಿ ಎಸ್ಕೇಪ್ ಮಾಡಿಸಿದ್ದಾರೆ. ವೈದ್ಯರಿಗೆ ಏನೋ ಆಗಿದೆ, ಶುಗರ್ ಕಡಿಮೆಯಾಗಿದೆ, ಬಿಪಿ ಜಾಸ್ತಿ ಆಗಿದೆಯೆಂದು ಹೈ ಡ್ರಾಮಾ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next