Advertisement

ಕಳಸಾ-ಬಂಡೂರಿ ಯೋಜನೆಗೆ ನ.1ರಂದು ಶಂಕುಸ್ಥಾಪನೆ ಸಾಧ್ಯತೆ

11:02 PM Oct 01, 2022 | Team Udayavani |

ಬೆಂಗಳೂರು: ಉತ್ತರ ಕರ್ನಾಟಕದ ಜನರ ಬಹುದಿನಗಳ ಹೋರಾಟದ ಮಹದಾಯಿ (ಕಳಸಾ- ಬಂಡೂರಿ) ಯೋಜನೆ ಕಾಮಗಾರಿಗೆ ಬಹುತೇಕ ನ.1ರಂದು ಭೂಮಿ ಪೂಜೆ ನೆರವೇರಿಸಲು ಸಿದ್ಧತೆ ನಡೆಸಲಾಗಿದೆ.

Advertisement

ಯೋಜನೆಗೆೆ ಕೇಂದ್ರ ಜಲಶಕ್ತಿ ಸಚಿವಾಲಯದ ಅನುಮತಿ ದೊರೆತಿದ್ದು, ಮುಂದಿನ ವಾರ ಆದೇಶ ರಾಜ್ಯ ಸರಕಾರದ ಕೈ ಸೇರಲಿದೆ. ಬಳಿಕ ಶಂಕುಸ್ಥಾಪನೆಗೆ ದಿನಾಂಕ ಪ್ರಕಟಿಸಲು ತೀರ್ಮಾ ನಿಸಲಾಗಿದೆ.

ಅರಣ್ಯ ಪ್ರದೇಶ ಕಡಿಮೆ ಬಳಕೆಗೂ ಯೋಜನೆಯಲ್ಲಿ ಬದಲಾವಣೆ ಮಾಡ ಲಾಗಿದ್ದು, 426 ಹೆಕ್ಟೇರ್‌ ಬದಲು 59 ಹೆಕ್ಟೇರ್‌ ಮಾತ್ರ ಬಳಕೆಯಾಗುತ್ತಿದೆ ಎಂದು ಹೇಳಲಾಗಿದೆ.

ಈಗ ಯೋಜನೆ ವೆಚ್ಚವನ್ನು 1,300 ಕೋಟಿ ರೂ. ಗೆ ಏರಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next