Advertisement

ಕಾಲಜ್ಞಾನದಲ್ಲಿ ಕೊರೊನಾಗೆ ಕೋಟಿ ಬಲಿ

01:16 PM Mar 20, 2020 | Suhan S |

ಚಿಂತಾಮಣಿ: ದಿನೇ ದಿನೆ ಕೋವಿಡ್ 19 ವೈರಸ್‌ ಹೆಚ್ಚುತ್ತಿರುವುದು ಕಂಡರೆ ದೈವ ಪುರುಷರೆಂದೇ ಪ್ರಸಿದ್ಧಿ ಪಡೆದಿದ್ದ ಆಂಧ್ರದ ಪೂತಲೂರು ವೀರಬ್ರಹ್ಮಯ್ಯ ಹೇಳಿದ ಪ್ರತಿಯೊಂದು ಮಾತು ಸತ್ಯವಾಗಿದೆ. ಅವರು ತಮ್ಮ ಕಾಲಜ್ಞಾನದಲ್ಲಿ 300 ವರ್ಷಗಳ ಹಿಂದೆಯೇ ಕೊರಂಗಿ (ಕೊರೊನಾ) ಕಾಯಿಲೆ ಬಗ್ಗೆ ದಾಖಲಿಸಿದ್ದು, ಸದ್ಯ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್‌ ಮರಣ ಮೃದಂಗ ಬಾರಿಸುತ್ತಿದೆ. ವೀರಬ್ರಹ್ಮಯ್ಯ ತಮ್ಮ ಕಾಲಜ್ಞಾನದಲ್ಲಿ ಬರೆದ ಪ್ರತಿಯೊಂದು ವಿಚಾರವು 20-21 ನೇ ಶತಮಾನದಲ್ಲಿ ನಡೆದಿದ್ದರಿಂದ ಕಾಲಜ್ಞಾನ ನೂರಕ್ಕೆ ನೂರರಷ್ಟು ಸತ್ಯ ಎನ್ನುವಂತಾಗಿದೆ.

Advertisement

ಕಾಲಜ್ಞಾನದಲ್ಲೇನಿದೆ ?: ಪೂತಲೂರಿನ ವೀರಬ್ರಹ್ಮಯ್ಯನವರು ಬರೆದ ಕಾಲಜ್ಞಾನದ 140ನೇ ಪದ್ಯದಲ್ಲಿ “ಈಶಾನ್ಯ ದಿಕ್ಕಿನ ವಿಷಗಾಳಿ ಪುಟ್ಟೇನು ಲಕ್ಷಲಾದಿ ಪ್ರಜಲು ಸಚ್ಚೆರಯ್ಯ ಕೊರಂಗಿಯನು ಜಬ್ಬು ಕೋಟಿಮಂದಿಕಿ ತಗುಲಿ ಕೊಡಿಲಾಗಾ ತೂಗಿ ಸಚ್ಚೇರಯ್ಯ’ ಎಂದು ದಾಖಲಾಗಿದೆ. ಅಂದರೆ ಬ್ರಹ್ಮಯ್ಯ ಈ ಪದ್ಯದಲ್ಲಿ ಚೀನಾವನ್ನು ಈಶಾನ್ಯ ದಿಕ್ಕಿಗೆ ಹೋಲಿಸಿದ್ದು, ಕೋವಿಡ್ 19 ವನ್ನು ಕೊರಂಗಿ ಎಂದು ಬರೆದಿದ್ದು, ಬ್ರಹ್ಮಯ್ಯರು ಬರೆದ ಎಲ್ಲಾ ವಿಷಯಗಳು ಸತ್ಯ ಎನ್ನುವಂತಾಗಿದೆ. ಕೊರೊನಾಗೆ ಕೋಟಿ ಮಂದಿ ಬಲಿಯಾಗುವರು ಎಂದು ಪ್ರಸ್ತಾಪಿಸಲಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಕಾಲಜ್ಞಾನದ ಒಂದು ತುಣುಕು ಸಂಪೂರ್ಣ ವಿವರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರವಚನಕಾರ ಟಿಎಲ್‌ ಆನಂದ್‌, ಅತೀಂದ್ರಿಯ ಜ್ಞಾನ ಪಡೆದ ಜ್ಞಾನಿಗಳು ಕಾಲಜ್ಞಾನ-ಭವಿಷ್ಯವಾಣಿಯನ್ನು ನುಡಿದಿರುತ್ತಾರೆ. ಅಂತಹ ಕಾಲಜ್ಞಾನಿಗಳಲ್ಲಿ ಕೈವಾರದ ತಾತಯ್ಯನವರು ಹಾಗೂ ಪೂತಲೂರಿನ ವೀರಬ್ರಹ್ಮಯ್ಯ ನವರು ಪ್ರಮುಖರು. ವೀರ ಬ್ರಹ್ಮಯ್ಯನವರು ರಚಿಸಿರುವ ಕಾಲಜ್ಞಾನದಲ್ಲಿ ಮುಂದೊಂದು ದಿನ “”ಕೋರಂಗಿ” ಎನ್ನುವ ಹೊಸ ಕಾಯಿಲೆಗೆ ಹೆಚ್ಚು ಜನ ಮರಣಿಸುವರು ಎಂಬ ಉಲ್ಲೇಖವಿರುವುದಾಗಿ ತಿಳಿದುಬಂದಿದೆ ಎಂದರು. ಒಟ್ಟಾರೆ ಕಾಲಜ್ಞಾನ ಮಾನವಕೋಟಿಗೆ ಎಚ್ಚರಿಕೆಯ ಗಂಟೆ ಎಂದೇ ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next