Advertisement

ಕಲಬುರಗಿ: ಮಾಜಿ ಸಚಿವರ ಸೋದರ ಪುತ್ರನ ಬರ್ಬರ ಕೊಲೆ

08:57 AM Mar 01, 2020 | Mithun PG |

ಕಲಬುರಗಿ: ಮಾಜಿ ಸಚಿವ ದಿ. ಸಿ.ಗುರುನಾಥ ಅವರ ಸೋದರ ಪುತ್ರರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ  ಜಿಲ್ಲೆಯ ಶಹಾಬಾದ ತಾಲೂಕಿನ ಮಾಲಗತ್ತಿ-ಶಂಕರವಾಡಿಯ ರಘೋಜಿ ಫ್ಯಾಕ್ಟರಿ ಬಳಿ ನಡೆದಿದೆ.

Advertisement

ಸತೀಶ್ ಕಂಬಾನೋರ (42) ಹತ್ಯೆಯಾದ ವ್ಯಕ್ತಿ.

ಸತೀಶ್ ಬೈಕ್ ಮೇಲೆ ಹೋಗುವಾಗ ಬೆನ್ನಟ್ಟಿದ ದುಷ್ಕರ್ಮಿಗಳು ಕೊಚ್ಚಿ ಪರಾರಿಯಾಗಿದ್ದು, ಹಳೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ‌ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಸತೀಶ್‌ ರ ಸಹೋದರ ಹಾಗೂ ಶಹಬಾದ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೋರ ಮೇಲೂ ಕೊಲೆ ಯತ್ನ ನಡೆದಿತ್ತು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಶಹಬಾದ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next