Advertisement

ವ್ಯಕ್ತಿ ನಾಪತ್ತೆಯಾಗಿ ಹನ್ನೆರಡು ದಿನವಾದರೂ ಪತ್ತೆಯಾಗದ ದೇಹ : ಕಣ್ಣೀರಿನಲ್ಲಿ ಕುಟುಂಬಸ್ಥರು

07:13 PM Jul 25, 2021 | Team Udayavani |

ಚಿಂಚೋಳಿ : ನದಿ ದಾಟುವ ವೇಳೆ ನೀರಿನ ರಭಸಕ್ಕೆ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿ ನಾಪತ್ತೆಯಾಗಿ ಒಂದು ವಾರ ಕಳೆದರೂ ದೇಹ ಇನ್ನೂ ಪತ್ತೆಯಾಗಿಲ್ಲ ತನ್ನ ತಂದೆ ಎಲ್ಲಿ ಎಂದು ಒಂದು ವರ್ಷದ ಮಗ ಅಳುತ್ತಿದ್ದರೆ ಅತ್ತ ಮಗ ಬರುತ್ತಾನೆ ಎಂದು ಹೆತ್ತ ತಂದೆ ತಾಯಿ ದಾರಿನೋಡುತ್ತಿದ್ದಾರೆ.

Advertisement

ಜುಲೈ 12ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋತಂಗಲ್ ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ ನದಿಯನ್ನು ದಾಟಲು ಹೋದ ಪ್ರಹ್ಲಾದ್ ದಶರಥ (32) ಎಂಬ ವ್ಯಕ್ತಿ ನದಿ ನೀರಿನ ರಭಸಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ, ಈ ವೇಳೆ ಸಾಕಷ್ಟು ಹುಡುಕಾಡಿದರು ದೇಹ ಪತ್ತೆಯಾಗಿಲ್ಲ.

ಈತನ ಶವ ಇನ್ನೂ ಪತ್ತೆಯಾಗದ ರಿಂದ ಅತ್ತ 1ವರ್ಷದ ಚಿಕ್ಕ ಮಗು ತಂದೆಯ ಬರುವಿಕೆಗಾಗಿ ದಿನಾಲು ಅಳುತ್ತಿದೆ. ಇಬ್ಬರು ಸಹೋದರಿಯರು ತಂದೆ ತಾಯಿ ಹೆಂಡತಿ ಸೇರಿ ಇಡೀ ಕುಟುಂಬವೇ ಕಣ್ಣೀರಿನಿಂದ ಕಾಲಕಳೆಯುತ್ತಿದ್ದಾರೆ.

ಇದನ್ನೂ ಓದಿ :ಅತ್ಯಾಚಾರ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ವಿಧಿಸಿ : ಉಪ್ಪಾರ ನೌಕರರ ಸಂಘದ ಒತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next