Advertisement

ಕಲಬುರಗಿ : ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್ ಬರ್ಬರ ಹತ್ಯೆ

04:58 PM May 08, 2022 | Team Udayavani |

ಕಲಬುರಗಿ : ನಗರದ ಶಹಾಬಜಾರ್ ನಾಕಾ ಬಳಿಯ ಲಾಲ್ ಹನುಮಾನ್ ನಗರದಲ್ಲಿ ಅಪರಾಹ್ನ ರೌಡಿಶೀಟರ್ ರಾಘು (28)ನನ್ನ ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಗುಂಪೊಂದು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

Advertisement

ಹಲವಾರು ಸುಲಿಗೆ ಕೊಲೆ ಪ್ರಯತ್ನದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ರಾಘುನನ್ನು ವಿರೋಧಿ ಗುಂಪು ಅಟ್ಟಾಡಿಸಿಕೊಂಡು ಲಾಂಗು ಮಚ್ಚು ಹಾಗೂ ಕತ್ತಿಗಳಿಂದ ಕೊಚ್ಚಿ ಕೊಲೆ ಮಾಡಿದೆ.

ಈ ಕುರಿತು ಸ್ಥಳೀಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಇಂದೋರ್ : 7 ಮಂದಿ ಸಾವನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಘಟನೆಯ ಹಿಂದಿದೆ ಲವ್ ಸ್ಟೋರಿ

Advertisement

Udayavani is now on Telegram. Click here to join our channel and stay updated with the latest news.

Next