Advertisement

Kalaburagi; ಸಿದ್ಧರಾಮಯ್ಯ ಲೂಟಿಕೋರ ಅಲ್ಲ, ಜುಗ್ಗಯ್ಯ…: ಕಾಗಿನೆಲೆ ಶ್ರೀಗಳು

07:11 PM Sep 16, 2024 | Team Udayavani |

ಕಲಬುರಗಿ (ಕವಲಗಾ): ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡಾದಲ್ಲಿ ಲೂಟಿ ಮಾಡಿದ್ದಾರೆಂದು ಕಳಂಕ ತರುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಅವರು ಜುಗ್ಗಯ್ಯ (ಕಂಜೂಸ್), ನಯಾ ಪೈಸೆ ಸ್ವಂತಕ್ಕೆ ಬಳಸಿಲ್ಲ, ತಮ್ಮವರಿಗೂ ನೀಡಿಲ್ಲ ಎಂದು ಕಾಗಿನಲೆ ಸಂಸ್ಥಾನದ ಸಿದ್ಧರಮಾನಂದ ಮಹಾಸ್ವಾಮೀಜಿ ಹೇಳಿದರು.

Advertisement

ಕಲಬುರಗಿ ಜಿಲ್ಲೆಯ ಕವಲಗಾ (ಕೆ) ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಂದೆ ರಾಯಣ್ಣನನ್ನು ಯಾರೂ ಮಸಲತ್ತು, ಮೋಸ ಮಾಡಿ ಸೋಲಿಸಿದರೋ, ಕೊಲ್ಲಿಸಿದರೋ ಅದೇ ಮಾದರಿಯಲ್ಲಿ ಈಗ ಕುರುಬ ಸಮಾಜದ, ನಾಡಿನ ಒಳ್ಳೆಯ ನಾಯಕ, ಹಲವು ಭಾಗ್ಯಕೊಟ್ಟ ಅನ್ನರಾಮಯ್ಯ ಅವರನ್ನೂ ಕೂಡ ಮುಗಿಸಲು ಹೊರಟಿದ್ದಾರೆ ಎಂದರು.

ಬಸವ ತತ್ವ ಪಾಲಿಸುವ ಸಿದ್ದರಾಮಯ್ಯ, ನಿಜವಾಗಲೂ ಬಂಧು ಬಳಗ ಬಂದರೆ ಸಮಯವಿಲ್ಲ ಎನ್ನಿ, ಶಿವಭಕ್ತರು ಬಂದರೆ ಶರಣು ಎನ್ನಿ ಎನ್ನುವ ತತ್ವ ಪಾಲಿಸಿದ್ದಾರೆ. ಅವರಿಗೆ ದ್ರೋಹ ಮಾಡಿದವರಿಗೆ ಖಂಡಿತ ಒಳ್ಳೆಯದಾಗಲ್ಲ, ಅದನ್ನು ಸಹಿಸಲಾಗದು ಎಂದರು.

ಸಿಎಂ, ಸಚಿವರು ಹಾಗೂ ಶಾಸಕರು‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next