Advertisement
ಕರ್ನಾಟಕ-ಮಹಾರಾಷ್ಟ್ರ ಗಡಿಯ ಅರ್ಜುಣಗಿ ತಾಂಡಾ, ದುಧನಿಯ ಗಾಂಧಿ ನಗರ ತಾಂಡಾ, ಮೇತ್ರೆ ತಾಂಡಾ 1-ಮೇತ್ರೆ ತಾಂಡಾ-2, ಶಿವಾಜಿ ನಗರ ಎನ್ನುವ ತಾಂಡಾಗಳೇ ಮಧ್ಯ ಮುಕ್ತವಾಗಿ, ಅಭಿವೃದ್ಧಿಯತ್ತ ಮುಖ ಮಾಡುತ್ತಿವೆ. ಇದೆಲ್ಲ ಸಾಧ್ಯವಾಗಿರುವುದು ಮೌನ ಯೋಗಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮೀಜಿ ಸಂಕಲ್ಪದಿಂದ.
Related Articles
Advertisement
ಮಾದರಿ ಕಾರ್ಯ: ಕಲಬುರಗಿ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಮಾತನಾಡಿ, ಮೌನಯೋಗಿಗಳು ತಾಂಡಾಗಳನ್ನು ವ್ಯಸನಮುಕ್ತರನ್ನಾಗಿ ಮಾಡಿರುವುದು ಮಾದರಿ ಹಾಗೂ ಸಮಾಜಮುಖೀ ಕಾರ್ಯವಾಗಿದೆ ಎಂದರು. ನಂತರ ನೀರಿನ ಸದ್ಬಳಕೆ ಕುರಿತು ಉಪನ್ಯಾಸ ನೀಡಿದರು.
ಸರಪಂಚ ಪೋಪಟ್ರಾವ್ ಪವಾರ ಮಾತನಾಡಿ, ತಮ್ಮ ಹಿವರೇ ಬಜಾರ್ನ್ನು ರಾಷ್ಟ್ರದಲ್ಲೇ ಆದರ್ಶ ಗ್ರಾಮವನ್ನಾಗಿಸಿದ ಹಾಗೂ ದುಶ್ಚಟಗಳ ನಿವಾರಣೆ ಜತೆಗೆ ಯಶಸ್ವಿ ಕೃಷಿ ಕಾಯಕ ಕೈಗೊಳ್ಳುವ ಕುರಿತು ವಿವರಣೆ ನೀಡಿದರು. ಡಾ| ಶಿವರತ್ನ ಶೆಠೆ ಉಪನ್ಯಾಸ ನೀಡಿದರು.
ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗೊಬ್ಬುರ ಬಿ. ವಾಡಿಯ ಬಳಿರಾಮ ಮಹಾರಾಜ್, ಎರಡೆತ್ತಿನ ಮಠದ ಸಿದ್ಧಲಿಂಗ ಸ್ವಾಮೀಜಿ, ಮಸೂತಿಯ ಭುಕುಮಾರ ಸ್ವಾಮೀಜಿ, ಯಲಬುರ್ಗಾ ಬಸವಲಿಂಗ ಸ್ವಾಮೀಜಿ, ಮೂಡಿಯ ಸದಾಶಿವ ಸ್ವಾಮೀಜಿ, ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುಳೇದ ಗುಡ್ಡ ಕಾಶೀನಾಥ ಸ್ವಾಮೀಜಿ, ಬಳೂರ್ಗಿಯ ಶಂಭುಲಿಂಗ ಸ್ವಾಮೀಜಿ, ದುಂಡಸಿಯ ಕುಮಾರ ಸ್ವಾಮೀಜಿ, ಸಿನ್ನೂರ ಸ್ವಾಮೀಜಿ ಪಾಲ್ಗೊಂಡಿದ್ದರು.
ಅಕ್ಕಲಕೋಟ ಸಿಪಿಐ ವಿಜಯ ಜಾಧವ, ಸಾಧಿಕ ವಳಸಂಗಕರ, ಹರಿಶ್ಚಂದ್ರ ರಾಠೊಡ, ಲಾಲು ಪವಾರ, ಧನಸಿಂಗ್ ಚವ್ಹಾಣ, ಗೋಪಿ ರಾಠೊಡ, ಸುರೇಶ ರಾಠೊಡ, ಲಕ್ಷ್ಮಣ ರಾಠೊಡ, ಧನಸಿಂಗ್ ಜಾಧವ್, ಧೇನು ರಾಠೊಡ, ಸರಪಂಚ ಮಲ್ಲಮ ಹೌದೆ, ಅಶೋಕ ರಾಠೊಡ, ರಾಜಶೇಖರ ಸೋಳಸೆ, ಶಿವಾನಂದ ಬಿರಾಜದಾರ, ಸಿದ್ದಣ್ಣ ಗುಳಗೊಂಡ, ಸಾತಲಿಂಗ ತುಪ್ಪದ, ರಾಜಶೇಖರ ಕೌಂಚಿ ಮುಂತಾದವರಿದ್ದರು.
ಫೋಮು ರಾಠೊಡ ಪ್ರಾಸ್ತಾವಿಕವಾಗಿಮಾತನಾಡಿದರು. ಶಂಕರ ರಾಠೊಡ, ಮಲ್ಲಿನಾಥ ಎಂಟಮನಿ ನಿರೂಪಿಸಿದರು, ಗಣೇಶ ಪವಾರ ವಂದಿಸಿದರು. ಕಾರ್ಯಕ್ರಮಕ್ಕೂ ಮುಂಚೆ ಮೌನಯೋಗಿಗಳ ನೇತೃತ್ವದಲ್ಲಿ ತಾಂಡಾಗಳಲ್ಲಿ ಪ್ರಭಾತಪೇರಿ ನಡೆಯಿತು.