Advertisement

ನುಡಿಜಾತ್ರೆಗೆ ಪುಟಾಣಿಗಳ ದೇಣಿಗೆ

12:09 PM Jan 31, 2020 | |

ಕಲಬುರಗಿ: ಅಕ್ಷರ ಜಾತ್ರೆಗೆ ಜಯನಗರದ ವಾಣಿ ವಿಲಾಸ್‌ ಪಬ್ಲಿಕ್‌ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಗುರುವಾರ ಜಿಲ್ಲಾಧಿಕಾರಿ ಶರತ್‌ ಬಿ. ಅವರಿಗೆ 10 ಸಾವಿರ ರೂ. ದೇಣಿಗೆ ನೀಡಿದರು.

Advertisement

ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾಹಿತ್ಯ ಸಮ್ಮೇಳನದ ಪ್ರಚಾರ ರಥದ ಚಾಲನೆ ಸಂದರ್ಭದಲ್ಲಿ ವಾಣಿ ವಿಲಾಸ ಶಿಕ್ಷಣ ಸಂಸ್ಥೆಯ ಡಾ| ಪೂಜಾ ಉತ್ತಮ, ಮುಖ್ಯಶಿಕ್ಷಕಿ ವಾಣಿ ಪ್ರಸಾದ, ಶಿಕ್ಷಕ ಅರುಣಕುಮಾರ ಅವರೊಂದಿಗೆ ಆಗಮಿಸಿದ ಶಾಲೆಯ ವಿದ್ಯಾರ್ಥಿಗಳಾದ ವರ್ಷಾ, ತನ್ಮಯ್‌, ಶಿವಾನಿ, ಮಹೇಶ್ವರಿ ಮತ್ತು ಪ್ರಣಿತಾ ಜಿಲ್ಲಾಧಿಕಾರಿಗೆ 10 ಸಾವಿರ ರೂ. ಮೊತ್ತದ ಚೆಕ್‌ ಹಸ್ತಾಂತರಿಸಿದರು.

ಮಕ್ಕಳು ನೀಡಿದ ಚೆಕ್‌ನ್ನು ಪ್ರೀತಿಯಿಂದ ಸ್ವೀಕರಿಸಿದ ಜಿಲ್ಲಾ ಧಿಕಾರಿ ಮಕ್ಕಳಿಗೆ ಚಾಕೊಲೇಟ್‌ ನೀಡಿದಲ್ಲದೆ ಕೈಕುಲಕಿ ಧನ್ಯವಾದ ತಿಳಿಸಿದರು. ಶಾಲೆಯ ಶಿಕ್ಷಕರು, ಸಂಸ್ಥೆ ಮತ್ತು ಮಕ್ಕಳು ಒಟ್ಟಾಗಿ ನುಡಿ ಸಮ್ಮೇಳನಕ್ಕೆ ಶಾಲೆಯಲ್ಲಿ ಹಣ ಸಂಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next