Advertisement

ಕಲಬುರಗಿ: ಇಂದು ಜೆಡಿಎಸ್‌ ನಿರ್ಧಾರ ?

10:20 PM Sep 12, 2021 | Team Udayavani |

ಬೆಂಗಳೂರು: ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್‌ ಯಾರಿಗೆ ಬೆಂಬಲ ನೀಡಲಿದೆ ಎಂಬುದು ಸೋಮವಾರ ಅಂತಿಮಗೊಳ್ಳುವ ಸಾಧ್ಯತೆಯಿದೆ.

Advertisement

ಮಲ್ಲಿಕಾರ್ಜುನ ಖರ್ಗೆ ಅವರು ಎಚ್‌.ಡಿ. ದೇವೇಗೌಡರ ಜತೆ ಮಾತನಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅಥವಾ  ಡಿ.ಕೆ.ಶಿವಕುಮಾರ್‌ ಅವರು  ಕುಮಾರಸ್ವಾಮಿ ಜತೆ ಮಾತನಾಡಿದರೆ ಬೆಂಬಲ ಸಿಗಬಹುದು ಎಂಬ ಮಾತು ಜೆಡಿಎಸ್‌ನಿಂದ ಕೇಳಿಬರುತ್ತಿವೆ.

ಬೆಂಬಲ ನೀಡುವ ಕುರಿತು ನನ್ನ ಜತೆ ಯಾರೂ ಮಾತನಾಡಿಲ್ಲ, ಬಿಜೆಪಿಯವರು ಮನವಿ ಮಾಡಿದ್ದಾರೆ.  ಶಾಸಕರು ಹಾಗೂ ನಮ್ಮ ಪಕ್ಷದ ಪಾಲಿಕೆ ಸದಸ್ಯರ ಜತೆ ಚರ್ಚಿಸಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಾಲೋಚನೆ ನಡೆಸಿ ತೀರ್ಮಾನಿಸಲಾಗುವುದು ಎಂದು  ಕುಮಾರಸ್ವಾಮಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next