Advertisement

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಚಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

02:49 PM Oct 04, 2024 | Team Udayavani |

ಕಲಬುರಗಿ: ಜಿಲ್ಲೆಯ ಅಧಿಕಾರಿಗಳು ಮಾತು ಕೇಳುತ್ತಿಲ್ಲ. ಕೊಬ್ಬು ಜಾಸ್ತಿಯಾಗಿದೆ, ಚಳಿ ಬಿಡಿಸಬೇಕಾಗಿದೆ. ಇಲ್ಲದೆ ಹೋದರೆ ನಮ್ಮ ಮಾತು ಕೇಳುವುದಿಲ್ಲ ಎಂದು ಆಳಂದ ಶಾಸಕ ಹಾಗೂ ಸಿಎಂ‌ ಸಲಹೆಗಾರ ಬಿ.ಆರ್.ಪಾಟೀಲ್ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಅಧಿಕಾರಿಯೂ ನಮ್ಮ ಮಾತು ಕೇಳುತ್ತಿಲ್ಲ. ಜನರ ಸಮಸ್ಯೆಗಳಿಗೂ ಸ್ಪಂಧಿಸುತ್ತಿಲ್ಲ. ಮೂಲಭೂತ‌ಗಳಿಗಾಗಿ ಜನರು ಪರದಾಡುತ್ತಿದ್ದಾರೆ. ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಪಾಲಿಕೆ ಕಮಿಷನರ್ ಸೇರಿದಂತೆ ಯಾವ ಅಧಿಕಾರಿ ಈ ಸಮಸ್ಯೆ ಕುರಿತು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇವರೆಲ್ಲಾ   ಕೊಬ್ಬಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಸಿಇಓ, ಪಾಲಿಕೆ ಆಯುಕ್ತ ಮಾತೇ ಕೇಳುತ್ತಿಲ್ಲ. ಇದರಿಂದ ಸರಕಾರಕ್ಕೆ ಕೆಟ್ಟ ‌ಹೆಸರು ಬರುತ್ತಿದೆ. ಇದೆಲ್ಲವನ್ನು ಉಸ್ತುವಾರಿ ಸಚಿವ ಪ್ರಿಯಾಂಕ್ ಅವರಿಗೆ ನಾವು ಮಕ್ಕಳಂತೆ ದೂರು ನೀಡಬೇಕಾಗಿದೆ. ಇದು ಸರಿಯೇ ಎಂದು ಪ್ರಶ್ನೆ ಮಾಡಿದರು.

ಕೆಲವು ಕಾಮಗಾರಿ ಕಳಪೆಯಾದಾಗ ಆ ಅಧಿಕಾರಿ ಕರೆದು ಬಿಲ್ ಮಾಡಬೇಡಿ ಅಂದ್ರು ಮಾಡಿ ಕಳಿಸ್ತಾರೆ. ಇದಕ್ಕೆ ಪಾಲಿಕೆ ಉಪ ಆಯುಕ್ತ ಜಾಧವ್ ಅವರನ್ನು ಕೂಡಲೇ ಕಿತ್ತು ಹಾಕಬೇಕು. ಈ ಮನುಷ್ಯ ಎಲ್ಲ ಸರಕಾರದಲ್ಲೂ ಇರುತ್ತಾನೆ. ಹೇಗೆ ಇವರೆಲ್ಲಾ ಒಂದೇ ಸ್ಥಳದಲ್ಲಿ 20 ವರ್ಷ ಕೆಲಸ ಮಾಡುತ್ತಾರೆ ಎಂದು ಕಿಡಿಕಿಡಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next