Advertisement

ಕಲಬುರಗಿ: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ

02:27 PM May 30, 2023 | Team Udayavani |

ಕಲಬುರಗಿ: ಸಹೋದರನ ಮಗನ ಮದುವೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬನನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಭರತ್ ತಾಂಡಾದಲ್ಲಿ ಸೋಮವಾರ ರಾತ್ರಿ ನಡೆದಿದೆ.

Advertisement

ಕೊಲೆಯಾದ ವ್ಯಕ್ತಿಯನ್ನು ಲಕ್ಷ್ಮಣ್ ಚೌಹಾಣ್ (55) ಎಂದು ಗುರುತಿಸಲಾಗಿದೆ. ಈತ ತನ್ನ ಸಹೋದರನ ಪುತ್ರನ ಮದುವೆಗೆ ಆಗಮಿಸಿದ್ದ. ಸೋಮವಾರ ರಾತ್ರಿ ಊಟವಾದ ಮೇಲೆ ಲಂಬಾಣಿ ಸಂಪ್ರದಾಯದಂತೆ ನೃತ್ಯ ನಡೆದಿತ್ತು. ಸಂದರ್ಭದಲ್ಲಿ ರಾತ್ರಿ 3 ವರೆಗೂ ನೃತ್ಯ ನಡೆದಿತ್ತು. ಬಳಿಕ ಈತನ ಕೊಲೆಯಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಕೊಲೆಯಾದ ವ್ಯಕ್ತಿ ಪಾರ್ಶ್ವವಾಯು ರೋಗದಿಂದ ಬಳಲುತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಎಂ .ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ತಂಡವನ್ನು ರಚನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next