Advertisement

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

07:25 PM Apr 20, 2024 | Team Udayavani |

ಕಲಬುರಗಿ: ಶನಿವಾರ ಜಿಲ್ಲೆಯ ಆಳಂದ ತಾಲೂಕಿನ‌ಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದಾನೆ.‌

Advertisement

ನರೋಣಾ ಗ್ರಾಮದಲ್ಲಿ ಜಮೀನಿನಿಂದ ಎತ್ತಿನ ಬಂಡಿಯಲ್ಲಿ ಮನೆಗೆ ವಾಪಾಸು ಬರುವಾಗ ಸಿಡಿಲು ಬಡಿದು ಮಹೇಶ್ (10) ಸಾವನ್ನಪ್ಪಿದ್ದು, ಈ ಕುರಿತು ನರೋಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಆಳಂದ ತಾಲೂಕಿನಾಧ್ಯಾಂತ ವರುಣ ತನ್ನ ಆರ್ಭಟ ತೋರಿಸಿದ್ದು ಒಂದೂ ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಮಳೆ‌ ಸುರಿದಿದೆ. ಆಳಂದ ಪಟ್ಟಣ, ಪಡಸಾವಳಿ, ಖಜೂರಿ, ನಿಂಬರ್ಗಾ ಸೇರಿ ಹಲವು ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ.‌ಗ್ರಾಮದ ರಸ್ತೆಗಳ ಮೇಲೆ ರಭಸವಾಗಿ ಹರಿದ ಮಳೆ ನೀರು. ಮಳೆ ನೀರಿನ ರಭಸಕ್ಕೆ ದ್ವಿಚಕ್ರ ವಾಹನಗಳು ನೆಲಕ್ಕುರುಳಿವೆ.‌

ಆಳಂದ ತಾಲೂಕಿನ ಖಜೂರಿ ಬಳಿ ಭಾರೀ ಗಾಳಿಗೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಮುಖ್ಯ ರಸ್ತೆ ಮೇಲೆ ಲಾರಿ ಪಲ್ಟಿಯಾಗಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿತು.‌

Advertisement

Udayavani is now on Telegram. Click here to join our channel and stay updated with the latest news.

Next