Advertisement

Kalaburagi: ಬಾಲಕಿಯನ್ನು ಬಸ್ಸಿನಿಂದ ಹೊರಗೆಳೆದು ಕತ್ತು ಕೊಯ್ದು ಪರಾರಿಯಾದ ಬಾಲಕರು

05:48 PM Feb 22, 2024 | Team Udayavani |

ಕಲಬುರಗಿ: ಪ್ರೇಮ ನಿವೇದನೆಯ ಹಿನ್ನೆಲೆಯಲ್ಲಿ ಬಾಲಕಿ ಒಬ್ಬಳನ್ನು ಇಬ್ಬರು ಬಾಲಕರು ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ಎಳೆದು ತಂದು ಕತ್ತು ಕೊಯ್ದ ಭೀಕರ ಘಟನೆ ಅಟ್ಟೂರ ಕ್ರಾಸ್ ಬಳಿ ಇಂದು ಬೆಳಗ್ಗೆ ನಡೆದಿದೆ.

Advertisement

ಬಾಲಕಿಯನ್ನು ಅಂಬಿಕಾ ಕಾರಬಾರಿ ಎಂದು‌ ಗುರುತಿಸಲಾಗಿದೆ. ಆಕೆ 10ನೇ ತರಗತಿಯಲ್ಲಿ‌ ಓದುತ್ತಿದ್ದಳು.

ಬೆಳಮಗಿ ಗ್ರಾಮದಿಂದ ವಿಕೆ ಸಲಗರಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದಳು. ಈ ವೇಳೆ ಸಿನಿಮೆಯ ರೀತಿಯಲ್ಲಿ ಬೈಕಿನಲ್ಲಿ ಬಸ್ ಅನ್ನು ಚೇಸ್ ಮಾಡಿದ ಚನ್ನವೀರ ಹಾಗೂ ಆತನ ಗೆಳೆಯ ಬಸ್ಸಿಗೆ ಬೈಕಿನಿಂದ ಅಡ್ಡಗಟ್ಟಿ ಬಸ್ಸಿನೊಳಗಿದ್ದ ಅಂಬಿಕಾಳನ್ನು ಹೊರಗೆಡೆ ಎಳೆದಿದ್ದಾರೆ. ಈ ವೇಳೆಯಲ್ಲಿ ಅವರು ಕೈಯಲ್ಲಿ ಚಾಕು ಹಿಡಿದಿದ್ದರಿಂದ ಸಾರ್ವಜನಿಕರು ಯಾರು ಬಾಲಕಿಯ ರಕ್ಷಣೆಗೆ ಬರಲಿಲ್ಲ. ಹೀಗಾಗಿ ಬಾಲಕಿಯನ್ನು ಬಸ್ಸಿನಿಂದ ಕೆಳಗಿಳಿಸಿ ಕತ್ತು ಕೊಯ್ದಿದ್ದಾರೆ. ರಕ್ತದ ಮಗುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆಯಲ್ಲಿ ಬಾಲಕಿಯ ರಕ್ಷಣೆಗೆ ಬಸ್ಸಿನ ನಿರ್ವಾಹಕರು, ಚಾಲಕರು ಹಾಗೂ ಸಾರ್ವಜನಿಕರು ಯಾರು ಬಾರದೆ ಇರುವುದು ವಿಪರ್ಯಾಸ ಎನಿಸಿದೆ.

ಕೊಲೆಗೆತ್ನಿಸಿದ ಬಾಲಕರಿಬ್ಬರು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಕಳೆದ ಹಲವಾರು ದಿನಗಳಿಂದ ಅವರು ಅಂಬಿಕಾಳನ್ನು ಪ್ರಚೋದಿಸುತ್ತಿದ್ದರು. ಆದರೆ ಇಂದು ಗುರುವಾರ ತಮ್ಮ ಪ್ರೇಮ ನಿವೇದನೆಯ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಅಂಬಿಕಾಳ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Belgavi;ಭೀಕರ ಕಾರು ಅಪಘಾತದಲ್ಲಿ 6 ಮಂದಿ ದುರ್ಮರಣ:ಓರ್ವನ ಸ್ಥಿತಿ ಚಿಂತಾಜನಕ

Advertisement

Udayavani is now on Telegram. Click here to join our channel and stay updated with the latest news.

Next