Advertisement

Kalaburagi; ಕಾಂಗ್ರೆಸ್ ಪಕ್ಷ ಅರಾಜಕತೆಯನ್ನು ಪ್ರತಿಪಾದಿಸುತ್ತಿದೆ‌: ಪಿ.ರಾಜೀವ್

12:58 PM Feb 20, 2024 | Team Udayavani |

ಕಲಬುರಗಿ: ಕಾಂಗ್ರೆಸ್ ಪಕ್ಷವು ಅರಾಜಕತೆಯನ್ನು ಪ್ರತಿಪಾದಿಸುತ್ತಿದೆ‌. ಭಾರತ ಇಬ್ಬಾಗವಾಗಲು ಕಾಂಗ್ರೆಸ್‌ ಕಾರಣ. ಅದೇ ನೀತಿ ಇಂದಿಗೂ ಮುಂದುವರೆದಿದೆ. ಕೈ ಮುಗಿದು ಒಳಗೆ ಬಾ ಎನ್ನುವುದು ಕುವೆಂಪು ನೀಡಿದ ಸಂದೇಶ. ಮಾತುಮಾತಿಗೂ ಕುವೆಂಪು ಅವರನ್ನು ಬಳಿಸಿಕೊಳ್ಳುವ ಕಾಂಗ್ರೆಸ್ ಅವರ ವಿಚಾರಧಾರೆಗೆ ಅವಮಾನ ಮಾಡಿದೆ. ಪೋಷಕರು, ರಾಜ್ಯದ ಜನ ಛಿ ಥೂ ಎನ್ನುತ್ತಾರೆ. ಸರ್ಕಾರ ತಕ್ಷಣ ತಮ್ಮ ಆದೇಶ ಹಿಂಪಡೆಯಬೇಕು ಎಂದು ಕಲಬುರಗಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕಲಬುರಗಿ, ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಕಲಬುರಗಿಯಲ್ಲಿ ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಹುಮನಬಾದ್ ನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗುತ್ತಾರೆ ಎಂದರು.

ರಾಜ್ಯ ಸಭೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ನಮಗೆ ಯಾವುದೇ ಅಡ್ಡ ಮತದಾನದ ಭಯವಿಲ್ಲ. ನಮಲ್ಲಿ ಗೆಲುವಿಗೆ ಬೇಕಾದ ಮತಗಳಿವೆ. ಉಳಿದ ಮತಗಳನ್ನ ಎನ್ ಡಿಎ ಅಭ್ಯರ್ಥಿ ಗೆಲುವಿಗೆ ಹಾಕುತ್ತೇವೆ. ನಮ್ಮ ಮೈತ್ರಿ ಅಭ್ಯರ್ಥಿ ಗೆಲುವಿಗೆ ಪ್ರಯತ್ನ ಮಾಡುತ್ತೇವೆ ಎಂದರು.

ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಪಕ್ಷ ಬಿಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರಾಜೀವ್, ಯಾರು ಕೂಡಾ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಎಲ್ಲರೂ ನಮ್ಮ ಸಿದ್ದಾಂತ ಒಪ್ಪಿಕೊಂಡು ಬಂದಿದ್ದಾರೆ. ಆ ಸಿದ್ದಾಂತದ ಜೊತೆಗೆ ಪಕ್ಷದಲ್ಲಿ ಗಟ್ಟಿಯಾಗಿ ಇರುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next