Advertisement

ಕೈಕಂಬ ಪರ್ಲಿಯಾ: ಗುಜರಿ ಸೊತ್ತುಗಳಿಗೆ ಬೆಂಕಿ ತಗಲಿ ನಷ್ಟ

12:10 AM Feb 09, 2023 | Team Udayavani |

ಬಂಟ್ವಾಳ: ಬಿ.ಸಿ. ರೋಡಿನ ಕೈಕಂಬ ಪರ್ಲಿಯಾ ಬಳಿ ಬುಧವಾರ ಮುಂಜಾನೆ ಗುಜರಿ ಅಂಗಡಿಯ ಹೊರಭಾಗದಲ್ಲಿ ಶೇಖರಿಸಿಟ್ಟಿದ್ದ ಗುಜರಿ ಸಾಮಗ್ರಿಗಳಿಗೆ ಬೆಂಕಿ ತಗಲಿದ ಘಟನೆ ನಡೆದಿದ್ದು, ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ಠಾಣೆಯ ತಂಡ ತೆರಳಿ ಬೆಂಕಿ ನಂದಿಸುವ ಕಾರ್ಯನಿರ್ವಹಿಸಿದ್ದಾರೆ.

Advertisement

ಸ್ಥಳೀಯ ನಿವಾಸಿ ಯಾಕುಬ್‌ ಅವರಿಗೆ ಸೇರಿದ ಗುಜರಿ ಸೊತ್ತು ಗಳು ಸುಟ್ಟು ಹೋಗಿದ್ದು, ಸುಮಾರು 25 ಸಾವಿರ ರೂ. ನಷ್ಟ ಸಂಭವಿಸಿರಬಹುದೆಂದು ಅಂದಾಜಿಸ ಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಗುಜರಿ ರಾಶಿ ಹಾಕಿದ್ದು, ಪೂರ್ತಿ ಸುಟ್ಟಿದ್ದರೆ ಸ್ಥಳೀಯ ಮನೆಗಳಿಗೆ ಹಬ್ಬುವ ಅಪಾಯವಿತ್ತು. ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಹೆಚ್ಚಿನ ಹಾನಿ ತಪ್ಪಿದೆ.

ಕಾರ್ಯಾಚರಿಸಿದ ತಂಡ
ಬಂಟ್ವಾಳ ಅಗ್ನಿಶಾಮಕದಳದ ಚಂದ್ರ ಕಾಂತ, ರೋಹಿತ್‌, ರಾಜೇಶ್‌, ಕಿರಣ್‌ ಕುಮಾರ್‌, ಪ್ರಸಾದ್‌, ನಾಗರಾಜ್‌, ವಿಜಯ ಕುಮಾರ್‌ ಮೊದಲಾದವರು ಕಾರ್ಯಾಚರಣೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next