Advertisement

Kadambotsava: ವೇದಿಕೆ ಚುನಾವಣಾ ಪ್ರಚಾರ ಸಭೆಯಾಗಿದ್ದು ದುರ್ದೈವ: ಕಾಗೇರಿ ಕಿಡಿ

06:31 PM Mar 11, 2024 | Team Udayavani |

ಶಿರಸಿ: ಜಿಲ್ಲೆಗೆ ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯ ಅವರು ಕನ್ನಡಿಗರ ಹೆಮ್ಮೆಯ ಕದಂಬೋತ್ಸವ ವೇದಿಕೆಯನ್ನು ಚುನಾವಣಾ ಪ್ರಚಾರ ಸಭೆಯಾಗಿಸಿಕೊಂಡಿದ್ದು ದುರ್ದೈವ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಧಾನ ಹೊರ ಹಾಕಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಕದಂಬೋತ್ಸವ ಭಾವಹಿಸಿದ್ದು ಸಂತಸ. ಆದರೆ, ಅವರು ಪಂಪ ಪ್ರಶಸ್ತಿ ಇಲ್ಲೇ ಕೊಡಬೇಕಿತ್ತು. ಬೇರೆಲ್ಲೋ ನೀಡಿದ್ದು ಕನ್ನಡಿಗರ ಹೆಮ್ಮೆಯ ಉತ್ಸವಕ್ಕೆ, ಜಿಲ್ಲೆಗೆ ಶೋಭೆಯಲ್ಲ. ನಮ್ಮ ಜಿಲ್ಲೆಗೆ ಬಂದಾಗ ಜಿಲ್ಲೆಯ ಅಭಿವೃದ್ದಿ, ಕನ್ನಡನಾಡಿನ ಸಂಸ್ಕೃತಿ, ಅದರ ಬೆಳವಣಿಗೆ ಸರಕಾರದ ಬದ್ಧತೆ ಆಗಿತ್ತು. ಆ ಬಗ್ಗೆ ಮಾತನಾಡಬೇಕಿತ್ತು. ಆದರೆ, ಇಡೀ ವೇದಿಕೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದ ವೇದಿಕೆ ಮಾಡಿಕೊಂಡರು. ಇದು ಸರಕಾರಕ್ಕೂ ಗೌರವ ಅಲ್ಲ ಎಂದು ಆಕ್ಷೇಪಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ವಿವಿಧ ಹಂತದ ಪದಾಧಿಕಾರಿಗಳಾದ ಗುರುಪ್ರಸಾದ ಹೆಗಡೆ, ಶಿವಾಜಿ ನರಸಾನಿ, ಅಶೋಕ ಚಲವಾದಿ, ಪ್ರಶಾಂತ ನಾಯ್ಕ, ಸದಾನಂದ ಭಟ್ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next