Advertisement

ಕಡಕೊಳದಲ್ಲಿ ಸ್ಯಾಟಲೈಟ್‌ ರೈಲು ನಿಲ್ದಾಣ

12:57 PM Mar 27, 2017 | Team Udayavani |

ಮೈಸೂರು: ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ನಗರದಲ್ಲಿ ರೈಲ್ವೆ ಪ್ರಯಾಣಿಕರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ನಂಜನಗೂಡಿನ ಕಡಕೊಳದಲ್ಲಿ ಸ್ಯಾಟಲೈಟ್‌ ರೈಲು ನಿಲ್ದಾಣ ಆರಂಭಿಸಲಾಗುವುದು ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.

Advertisement

ನಗರದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಡೆದ ಸಾರ್ವಜನಿಕರ ಅನುಕೂಲಕ್ಕಾಗಿ ಕಲ್ಪಿಸಿರುವ ವೈಫೈ, ಎಸ್ಕಲೇಟರ್‌, ಲಿಪ್ಟ್ ಸೌಲಭ್ಯದ ಜತೆಗೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಿರುವ ಸಬ್‌ವೇ ಹಾಗೂ ಡಿಜಿಪೇ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮೈಸೂರು ಹಾಗೂ ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆಗೆ ಸಮಸ್ಯೆ ಯಾಗುತ್ತಿದೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೆಂಗೇರಿ ಯಲ್ಲಿ ಸ್ಯಾಟಲೈಟ್‌ ರೈಲು ನಿಲ್ದಾಣ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಆದರೆ ಮೈಸೂರಿನಲ್ಲಿ ಎದುರಾಗುರುವ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕಡಕೊಳ ದಲ್ಲಿ ಸ್ಯಾಟಲೈಟ್‌ ರೈಲು ನಿಲ್ದಾಣ ಆರಂಭಿಸ ಲಾಗುವುದು.

ಇನ್ನೂ ಚಾಮುಂಡಿ ಎಕ್ಸ್‌ಪ್ರೆಸ್‌Õ ರೈಲಿನಲ್ಲಿ ಹೆಚ್ಚಿನ ಜನಜಂಗುಳಿ ಇರುವುದರಿಂದ ಮತ್ತೂಂದು ರೈಲು ಸೇವೆ ಕಲ್ಪಿಸುವಂತೆ ಮನವಿ ಬಂದಿದ್ದರೂ, ಇದರ ಈಡೇರಿಕೆ ಸಾಧ್ಯವಾಗಿಲ್ಲ. ಈ  ಹಿನ್ನೆಲೆ ಮೈಸೂರು-ಬೆಂಗಳೂರು ನಡುವೆ ಕಲ್ಪಿಸಿರುವ ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡ ನಂತರ ವಿಶೇಷ ರೈಲು ಸೇವೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ನೈಋತ್ಯ ರೈಲ್ವೆ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಅತುಲ್‌ ಗುಪ್ತ ಮಾತನಾಡಿ, ಮೈಸೂರು ರೈಲು ನಿಲ್ದಾಣದಲ್ಲಿ ಲಿಫ್ಟ್, ಎಸ್ಕಲೇಟರ್‌, ಸಬ್‌ವೇ, ವೈಫೈ ಸೇವೆ ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವ ಮೂಲಕ ಜನಸ್ನೇಹಿ ರೈಲು ನಿಲ್ದಾಣ ಒದಗಿಸಲಾಗುತ್ತಿದೆ.

Advertisement

ಈ ವೈಫೈ ಸೌಲಭ್ಯ ಎಲ್ಲಾ ಪ್ರಯಾಣಿಕರೂ ಪಡೆಯಬಹುದಾಗಿದ್ದು, ದಿನದ 24 ಗಂಟೆಗಳು ವೈಫೈ ಸೌಲಭ್ಯವಿರುತ್ತದೆ ಎಂದು ಹೇಳಿದರು. ಶಾಸಕ ವಾಸು, ವಿಪ ಸದಸ್ಯ ಸಂದೇಶ್‌ ನಾಗರಾಜು, ಮೇಯರ್‌ ಎಂ.ಜೆ.ರವಿಕುಮಾರ್‌, ನೈರುತ್ಯ ರೈಲ್ವೆ ವಾಣಿಜ್ಯ ವ್ಯವಸ್ಥಾಪಕ ಪಿ.ರಾವ್‌ ಹಾಜರಿದ್ದರು.

ಸಾರ್ವಜನಿಕ ಸೇವೆಗೆ ಮುಕ್ತ
ರೈಲ್ವೆ ನಿಲ್ದಾಣಗಳನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮೈಸೂರು, ಬೆಂಗಳೂರಿನ ಯಶವಂತಪುರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವೈ-ಫೈ, ಎಸ್ಕಲೇಟರ್‌, ಲಿಫ್ಟ್ ವ್ಯವಸ್ಥೆ ಮತ್ತು ಮೈಸೂರು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ಗಳನ್ನು ಸಂಪರ್ಕಿಸುವ ಪ್ರಯಾಣಿಕ ಸಬ್‌ವೇ, ಡಿಜಿಪೇ ಸೌಲಭ್ಯ ಭಾನುವಾರ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು. 

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕಲ್ಪಿಸಿರುವ ವೈಫೈ, ಎಸ್ಕಲೇಟರ್‌, ಲಿಪ್ಟ್, ಸಬ್‌ವೇ ಸೌಲಭ್ಯಗಳಿಗೆ ರೈಲ್ವೆ ಸಚಿವ ಸುರೇಶ್‌ ಪ್ರಭು ಬೆಂಗಳೂರಿನಿಂದ ಆನ್‌ಲೈನ್‌ ವಿಡಿಯೋ ಲಿಂಕ್‌ ಮೂಲಕ ಉದ್ಘಾಟಿಸಿದರು. ನಗರ ರೈಲ್ವೆ ನಿಲ್ದಾಣದಲ್ಲಿ ಗೂಗಲ್‌ ಹಾಗೂ ರೈಲ್‌ಟೆಲ್‌ (ಭಾರತೀಯ ರೈಲ್ವೆ ಟೆಲಿಕಾಂ ವಿಭಾಗ)ದಿಂದ ಉಚಿತ ವೈಫೈ ಸೌಲಭ್ಯ ನೀಡಲಾಗುತ್ತಿದೆ.

ಜತೆಗೆ ಡಿಜಿಟಲ್‌ ಭಾರತ ಉದ್ದೇಶದಲ್ಲಿ ಪ್ರಮುಖ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸುವ ಕುರಿತು ರೈಲ್ವೆ ಮುಂಗಡಪತ್ರ 2016ರಲ್ಲಿ ಪ್ರಸ್ತಾಪಿಸಲಾಗಿತ್ತು. ಬೆಂಗಳೂರು- ಹಾಸನ ಈ ಮಾರ್ಗ 1996-97ರಲ್ಲಿ ಮಂಜೂರಾಗಿದ್ದು, 1290 ಕೋಟಿ ರೂ. (ರೈಲ್ವೆ 823 ಕೋಟಿ ರೂ., ಕರ್ನಾಟಕ ಸರ್ಕಾರ 467 ಕೋಟಿ ರೂ.) ಅಂದಾಜು ವೆಚ್ಚವಾಗಿದೆ. 167 ಕಿ.ಮೀ ಹೊಸ ರೈಲು ಮಾರ್ಗವನ್ನು 3 ಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ. 

ಮೊದಲ ಹಂತದಲ್ಲಿ 42 ಕಿ.ಮೀ. ಉದ್ದದ ಹಾಸನ-ಶ್ರವಣ ಬೆಳಗೊಳ ಭಾಗವನ್ನು 2006 ರಲ್ಲಿ ಲೋಕಾರ್ಪಣೆ ಗೊಳಿಸಲಾಯಿತು. 2ನೇ ಹಂತದಲ್ಲಿ 14 ಕಿ.ಮೀ ಉದ್ದದ ಚಿಕ್ಕಬಾಣಾವರ – ನೆಲಮಂಗಲ ಭಾಗವನ್ನು 2013ರಲ್ಲಿ ಲೋಕಾರ್ಪಣೆಗೊಳಿಸಲಾಯಿತು ಮತ್ತು ನೆಲಮಂಗಲದಿಂದ ಶ್ರವಣಬೆಳಗೊಳದವರೆಗಿನ 111 ಕಿ.ಮೀ ರೈಲು ಸೇವೆಗೂ ಭಾನುವಾರ ಚಾಲನೆ ದೊರೆಯಿತು.

Advertisement

Udayavani is now on Telegram. Click here to join our channel and stay updated with the latest news.

Next