Advertisement

Kadaba: ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

03:02 PM Jun 24, 2023 | Team Udayavani |

ಕಡಬ: ಸಕಲೇಶಪುರ ಮೂಲದ ವ್ಯಕ್ತಿಯೊಬ್ಬರು ಕಡಬ ತಾಲೂಕಿನ ಕೋಡಿoಬಾಳ ಗ್ರಾಮದ ದoಡುಗುರಿ ಸಮೀಪ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ 24 ರಂದು ಬೆಳಕಿಗೆ ಬಂದಿದೆ.

Advertisement

ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ಮೃತ ವ್ಯಕ್ತಿ.

ಕಡಬ ಪೊಲೀಸರು, ಸ್ಥಳೀಯರು ಹಾಗೂ ಶೌರ್ಯ ತಂಡದ ಸದಸ್ಯರು ನದಿಗಿಳಿದು ಕಾರ್ಯಚರಣೆ ನಡೆಸಿ ಮೃತದೇಹ ಪತ್ತೆ ಹಚ್ಚಿದ್ದಾರೆ. ಕುಮಾರಧಾರ ನದಿ ಬಳಿ ವ್ಯಕ್ತಿಯೊಬ್ಬರ ಶೂ ಪತ್ತೆಯಾದ ಹಿನ್ನಲೆ ಅನುಮಾನಗೊಂಡು ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು.

ಧರ್ಮಯ್ಯ ಮೂಲತ: ಹಾಸನ ಜಿಲ್ಲೆಯ ಸಕಲೇಶಪುರ ಬಾಲಗದ್ದೆಯವರು. ಕಡಬದ ಕೋಡಿಂಬಾಳ ಬಳಿ ರಬ್ಬರ್‌ ಕಟ್ಟಿಂಗ್‌ ಕೆಲಸಕ್ಕೆಂದು ಬಂದಿದ್ದರು.

ಕಡಬ ಪೊಲೀಸ್‌ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಕಡಬ ಠಾಣೆಯ ಪೊಲೀಸರು ಹಾಗೂ ಸ್ಥಳೀಯ ಶೌರ್ಯ ತಂಡದ ಮುರಳಿ, ಸೋಮಪ್ಪ, ಆನಂದ, ಅಪರ್ಣಾ, ಆಪತ್ಬಾಂದವ ತಂಡದ ಸದಸ್ಯರಾದ ರಫೀಕ್, ಮನೋಜ್, ಅನಿಲ್ ಸೇರಿದಂತೆ ಸ್ಥಳಿಯರು ಮೃತದೇಹ ಪತ್ತೆಹಚ್ಚಲು ಸಹಕರಿಸಿದರು.

Advertisement

ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next