Advertisement

ರೆಡಿಯಾಗಿದೆ ಕಂಬಳಬೆಟ್ಟು ಭಟ್ರೆನ ಮಗಲ್‌ !

01:02 PM Aug 16, 2018 | |

ತುಳು ಸಂಸ್ಕೃತಿ, ಸೊಗಡಿನೊಂದಿಗೆ ಸೆಟ್ಟೇರುತ್ತಿರುವ ‘ಕಂಬಳಬೆಟ್ಟು ಭಟ್ರೆನ ಮಗಲ್‌’ ನಿರ್ಮಾಣ ಕಾರ್ಯ ಇನ್ನೇನು ಅಂತಿಮ ಸ್ಟೇಜ್‌ನಲ್ಲಿದೆ. ಶರತ್‌ ಎಸ್‌. ಪೂಜಾರಿ ನಿರ್ದೇಶನದಲ್ಲಿ ಸಿನೆಮಾ ತಯಾರಾಗಿದೆ. ಹಾಸ್ಯದೊಂದಿಗೆ ಧನಾತ್ಮಕ ಚಿಂತನೆ ಜತೆಗೆ ಹೆಣ್ಣಿನ ಕಥೆಯನ್ನು ತುಳುನಾಡಿನ ಸಾಂಪ್ರದಾಯಿಕ ಸೊಗಡಿನೊಂದಿಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಶಿನಾಯಿ ಜೋಸೆಫ್ ಸಂಗೀತ ನಿರ್ದೇಶನದಲ್ಲಿ ಐದು ಹಾಡುಗಳಿವೆ. ಅಜಯ್‌ ವಾರಿಯರ್‌, ಸಂತೋಷ್‌ ವೆಂಕಿ, ಪ್ರಕಾಶ್‌ ಮಹಾದೇವನ್‌, ಸಂದೀಪ್‌ ಬಳ್ಳಾಲ್‌ ಸ್ವರ ನೀಡಿದ್ದಾರೆ. ರೊನಾಲ್ಡ್‌ ಮಾರ್ಟಿಸ್‌ ನಿರ್ಮಾಪಕರು.

Advertisement

ಐಶ್ವರ್ಯಾ ಎ. ಆಚಾರ್ಯ ನಾಯಕಿಯಾಗಿ ಅಭಿನಯಿಸಿದ್ದು, ಶೈಲೇಶ್‌, ಶರತ್‌ ಮತ್ತು ಪ್ರದೀಪ್‌ ಶೆಟ್ಟಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಲೆ, ದೀಪಕ್‌ ರೈ
ಪಾಣಾಜೆ ನಗಿಸಲು ರೆಡಿಯಾಗಿದ್ದಾರೆ. ರಮೇಶ್‌ ರೈ ಕುಕ್ಕುವಳ್ಳಿ ಚಿತ್ರದಲ್ಲಿ ಖಳನಟ. ಪ್ರಕಾಶ್‌ ಪೂಂಜ, ಸಂಕೇತ್‌ ಪೂಜಾರಿ, ಚಿದಾನಂದ ಅದ್ಯಪಾಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಬೆಂಗಳೂರು, ಹಾಸನ, ಚಿಕ್ಕಮಗಳೂರು, ಕೊಟ್ಟಿಗೆಹಾರ ಸೇರಿದಂತೆ ಕರಾವಳಿ ಭಾಗದಲ್ಲಿ ಈ ಸಿನೆಮಾದ ಶೂಟಿಂಗ್‌ ನಡೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next