Advertisement

ಮಳೆಯ ನಡುವೆಯೇ ಕಬಡ್ಡಿ ಪಂದ್ಯ: ಹುಣಸೂರಿನ ಮಹಿಳಾ ಕಾಲೇಜು ಪ್ರಥಮ

08:44 AM Aug 02, 2022 | Team Udayavani |

ಹುಣಸೂರು: ಕೃಷ್ಣರಾಜ ವಲಯ ಮಟ್ಟದ ಪದವಿ ಕಾಲೇಜುಗಳ ಮಹಿಳಾ ಕಬ್ಬಡ್ಡಿ ಪಂದ್ಯದಲ್ಲಿ ಹುಣಸೂರಿನ ಮಹಿಳಾ ಕಾಲೇಜು ತಂಡ ಪ್ರಥಮ, ಬನ್ನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ತಂಡ ದ್ವಿತೀಯ ಸ್ಥಾನಗಳಿಸಿವೆ.

Advertisement

ನಗರದ ಮಹಿಳಾ ಕಾಲೇಜಿನ ಆವರಣದಲ್ಲಿ ನಡೆದ ಅಂತಿಮ ಪಂದ್ಯದ ರೋಚಕ ಹಣಾಹಣಿಯಲ್ಲಿ ಹುಣಸೂರು ಕಾಲೇಜು ತಂಡವು 16-14 ಅಂಕಗಳ ಅಂತರದಲ್ಲಿ ವಿಜಯ ಸಾಧಿಸಿತು. ಕೆ.ಆರ್.ನಗರದ ಸರಕಾರಿ ಮಹಿಳಾ ಪದವಿ ಕಾಲೇಜು ತೃತೀಯ ಸ್ಥಾನ ಗಿಟ್ಟಿಸಿದೆ.

ಉದ್ಯಮಿ ಎಚ್.ಪಿ.ಅಮರ್‌ನಾಥ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. ವಿಜೇತ ತಂಡಗಳಿಗೆ ಸಿ.ಡಿ.ಸಿ.ಉಪಾಧ್ಯಕ್ಷ ಹನಗೋಡು ನಟರಾಜ್, ಸದಸ್ಯರಾದ ನಾಗರಾಜ್, ಚಿನ್ನವೀರಯ್ಯ, ಪ್ರಭಾರ ಪ್ರಾಚಾರ್ಯ ಪುಟ್ಟಶೆಟ್ಟಿ ಬಹುಮಾನ ವಿತರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್.ಭಾಸ್ಕರ್ ಹಾಗೂ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.

ಮಳೆಯಲ್ಲೇ ಕಬ್ಬಡ್ಡಿ-ಕಬ್ಬಡ್ಡಿ:

ಸೋಮವಾರ ಮುಂಜಾನೆಯೇ ಜಡಿಮಳೆ ಹಿಡಿದಿತ್ತು. ನಂತರ ಬಿಸಿಲು ಬಂದಿತ್ತಾದರೂ ಮದ್ಯಾಹ್ನದ ವೇಳೆಗೆ ಮಳೆ ನಿಂತು ಪಂದ್ಯಾಟ ಆರಂಭವಾದರೂ ಜಿನುಗು ಮಳೆ ನಡುವೆ ಜರಡಿ ಹಿಡಿದ ಕೋರ್ಟ್ ನಲ್ಲೇ ಕಬ್ಬಡ್ಡಿ ಆಟ ರಂಗೇರಿತ್ತು. ಸಾಕಷ್ಟು ಮಂದಿ ಕಬಡ್ಡಿಯ ರೋಚಕ ಪಂದ್ಯವನ್ನು ಕಣ್ತುಂಬಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next