![University Status: ರಾಜ್ಯದ ಒಂಬತ್ತು ವಿ.ವಿ.ಗಳ ಬಾಗಿಲು ಬಂದ್…ಇದಕ್ಕೆ ಹೊಣೆಗಾರರು ಯಾರು?](https://www.udayavani.com/wp-content/uploads/2025/02/Commission-1-415x234.jpg)
![University Status: ರಾಜ್ಯದ ಒಂಬತ್ತು ವಿ.ವಿ.ಗಳ ಬಾಗಿಲು ಬಂದ್…ಇದಕ್ಕೆ ಹೊಣೆಗಾರರು ಯಾರು?](https://www.udayavani.com/wp-content/uploads/2025/02/Commission-1-415x234.jpg)
Team Udayavani, Sep 10, 2024, 4:14 PM IST
ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ ‘ಕಾಲಾಪತ್ಥರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಲುಲು ಮಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್ ಟ್ರೇಲರ್ ರಿಲೀಸ್ ಮಾಡಿ ಶುಭಕೋರಿದರು.
ಚಿತ್ರದ ಟ್ರೇಲರ್ ನೋಡಿದಾಗ ಈ ಸಿನಿಮಾ ಹಿಟ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಚಿತ್ರದಲ್ಲೊಂದು ಗಟ್ಟಿ ಕಂಟೆಂಟ್ ಇದೆ. ಇಂತಹ ಸಿನಿಮಾಗಳನ್ನು ನಮ್ಮ ಕನ್ನಡ ಜನತೆ ಕೈ ಹಿಡಿದಾಗ ಮತ್ತಷ್ಟು ಪ್ರತಿಭೆಗಳು ಚಿತ್ರರಂಗದಲ್ಲಿ ನೆಲೆ ನಿಲ್ಲಲು ಸಾಧ್ಯವಾಗುತ್ತದೆ ಎಂದರು.
ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಶಿವರಾಜ್ಕುಮಾರ್ ಅವರಿಗೆ ಭುವನ್ ಮೂವೀಸ್ ವತಿಯಿಂದ ಬೆಳ್ಳಿ ಗದೆ ನೀಡಲಾಯಿತು. ಆ ಗದೆಯೊಂದಿಗೆ ಶಿವಣ್ಣ ಫೋಸ್ ಕೊಟ್ಟು ಖುಷಿಪಟ್ಟರು. ಟ್ರೇಲರ್ ಬಗ್ಗೆ ಹೇಳುವುದಾದರೆ,ಚಿತ್ರದ ಶೀರ್ಷಿಕೆಗೆ ತಕ್ಕ ಹಾಗೆ ಇದೊಂದು ಕಪ್ಪು ಕಲ್ಲಿನ ಕಥೆ. ಸಿನಿಮಾದ ನಾಯಕ ಯೋಧನಾಗಿ ಇಲ್ಲಿ ಕಾಣಿಸಿಕೊಂಡಿದ್ದಾನೆ. ಊರಿಗೆ ಹೆಮ್ಮೆ ತರುವ ಕೆಲಸ ಮಾಡಿದಾಗ, ಊರಲ್ಲಿ ಅವನ ಕಲ್ಲಿನ ಪ್ರತಿಮೆ ಎದ್ದು ನಿಲ್ಲುತ್ತೆ. ಅಲ್ಲಿಂದ ಮುಂದೆ ಏನೆಲ್ಲ ನಡೆಯುತ್ತೆ ಎಂಬುದೇ ಸಿನಿಮಾದ ವಿಷಯ.
ಕಥಾ ನಾಯಕ ಹಾಗೂ ಆ ಕಲ್ಲಿನ ಪ್ರತಿಮೆ ನಡುವಿನ ಬಂಧ, ದ್ವೇಷ, ಹೊಡೆದಾಟ, ಇವೆಲ್ಲದರ ನಡುವೆ ಇಲ್ಲೊಂದು ನವೀರಾದ ಪ್ರೇಮಕಥೆಯೂ ಇದೆ. ಕಾಲಾಪತ್ಥರ ಮೂಲಕ ಹೊಸಬಗೆಯ ಮನರಂಜನೆಯನ್ನು ಪ್ರೇಕ್ಷಕರು ನಿರೀಕ್ಷಿಸಬಹುದು. ಈ ಚಿತ್ರ ಸೆ.13 ಚಿತ್ರ ತೆರೆಗೆ ಬರಲಿದೆ. ಧನ್ಯಾ ಈ ಚಿತ್ರದ ನಾಯಕಿ.
ನಿಮ್ಮನ್ನು ಪಡೆದಿರುವ ನಾನೇ ಧನ್ಯ.. ಅಭಿಮಾನಿಗಳ ಪ್ರೀತಿ – ಪ್ರೋತ್ಸಾಹಕ್ಕೆ ಪತ್ರ ಬರೆದ ʼದಾಸʼ
Sandalwood: ವಿಷ್ಣು ಪ್ರಿಯ ಟ್ರೇಲರ್ಗೆ ಮೆಚ್ಚುಗೆ
Sandalwood: ಮಾ.28ಕ್ಕೆ ಮನದ ಕಡಲು ತೆರೆಗೆ
Mr. Rani Movie Review: ʼಮಿಸ್ಟರ್.ರಾಣಿʼ ನೋಡಿ ಮನಸ್ಸು ಹಗುರಾಗಿಸಿ.. ಹೇಗಿದೆ ಸಿನಿಮಾ?
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
University Status: ರಾಜ್ಯದ ಒಂಬತ್ತು ವಿ.ವಿ.ಗಳ ಬಾಗಿಲು ಬಂದ್…ಇದಕ್ಕೆ ಹೊಣೆಗಾರರು ಯಾರು?
ದೇಶದ ಅಭಿವೃದ್ಧಿಗಾಗಿ ಪ್ರಧಾನಿ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಡಲಿ: ಸಂತೋಷ್ ಲಾಡ್
ಕೀಳು ಮಟ್ಟದ ಪ್ರಶ್ನೆಗಳನ್ನು ಸಹಿಸಲು ಸಾಧ್ಯವಿಲ್ಲ: ಅಲಹಾಬಾದಿಯಾಗೆ ಸುಪ್ರೀಂ ತೀವ್ರ ತರಾಟೆ
ಕಕ್ಕಿಂಜೆ ಶಾಲೆಯ 10ಕ್ಕೂ ಹೆಚ್ಚು ಮಕ್ಕಳ ಮೇಲೆ ಹೆಜ್ಜೇನು ದಾಳಿ… ಆಸ್ಪತ್ರೆಗೆ ದಾಖಲು
ನಿಮ್ಮನ್ನು ಪಡೆದಿರುವ ನಾನೇ ಧನ್ಯ.. ಅಭಿಮಾನಿಗಳ ಪ್ರೀತಿ – ಪ್ರೋತ್ಸಾಹಕ್ಕೆ ಪತ್ರ ಬರೆದ ʼದಾಸʼ
You seem to have an Ad Blocker on.
To continue reading, please turn it off or whitelist Udayavani.