Advertisement

ರಮೇಶ್ ಕುಮಾರ್ ಗೆ ‘ಮಾಯಿಲ್ ಮರಾಠಿ’ ಎಂದು ನಿಂದಿಸಿದ ಸಚಿವ ಸುಧಾಕರ್

12:21 PM Jul 22, 2022 | Team Udayavani |

ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಈ ಹಿಂದೆ ಪತ್ರಿಕೆಯಲ್ಲಿ ‘ಮಾಯಿಲ್ ಮರಾಠಿ’ ಎನ್ನುತ್ತಿದ್ದರು. ಅಂದರೆ ನಮ್ಮ‌ಕೋಲಾರ ಭಾಗದಲ್ಲಿ ಮಂತ್ರವಾದಿ ಎಂದು ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ನ ಒಬ್ಬೊಬ್ಬರು ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದಾರೆ. ಸೋನಿಯಾ, ರಾಹುಲ್‌ ಗಾಂಧಿ ಹೆಸರಲ್ಲಿ ಆಸ್ತಿ ಮಾಡಿದ್ದಾರೆ. ನಾನು ಹೇಳೋದು ಏನಿದೆ ಎಂದರು.

ಭ್ರಷ್ಟಾಚಾರ ಬಗ್ಗೆ ದೊಡ್ಡ ಹಗರಣದ ಬಗ್ಗೆ ಅವರೇ ಹೇಳಿದ್ದಾರೆ. ನಾಲ್ಕು ತಲೆಮಾರಿಗೆ ಆಗುವ ಬಗ್ಗೆ ಆಸ್ತಿ ಮಾಡಿರುವುದಾಗಿ ಹೇಳಿದ್ದಾರೆ. ಅವರು ಹಳೆಯ ನಾಯಕರಲ್ವಾ.? ಅವರು ಬಹಳ ಸತ್ಯ ಹೇಳುತ್ತಿದ್ದಾರೆ ಎಂದರು.

ಇದನ್ನೂ ಓದಿ:ಕಾಂಗ್ರೆಸ್ – ಬಿಜೆಪಿ ಮಧ್ಯೆ ಡಿಬೇಟ್ ವಾರ್

ಕೋಲಾರ ಭಾಗದ ಎಲ್ಲಾ ಜನತೆಗೂ ಅವರ ಬಗ್ಗೆ ಗೊತ್ತಿದೆ. ಸ್ಪೀಕರ್ ಆಗಿ ಅವರ ವರ್ತನೆ ಬಗ್ಗೆ ನಾನು ಸದನದಲ್ಲೂ ಹೇಳಿದ್ದೇನೆ. ಇಡೀ‌ ದೇಶದಲ್ಲಿ ಯಾವ ಸ್ಪೀಕರ್ ಮಾಡದ ಘನಂದಾರಿ ಕೆಲಸ ಅವರು ಮಾಡಿದ್ದರು. ಹಿಂದೆ ಲಂಕೇಶ್ ಪತ್ರಿಕೆ ದ್ವಾರಕನಾಥ್ ಅವರು ರಮೇಶ್ ಕುಮಾರ್‌ ಗೆ ‘ಮಾಯಿಲ್ ಮರಾಠಿ’ ಅಂತ ಬಿರುದ್ದು ನೀಡಿದ್ದರು. ಮಾಯಿಲ್ ಮರಾಠಿ ಅಂದ್ರೆ ಕೋಲಾರ ಭಾಗದ ಮಂತ್ರವಾದಿ ಎಂದು ಟೀಕಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next