Advertisement

ಚುನಾವಣೆ ಬಂದರೆ ಬಿಜೆಪಿಗೆ ಖುಷಿ, ಕಾಂಗ್ರೆಸ್ ಗೆ ನಡುಕ: ಸಚಿವ ಈಶ್ವರಪ್ಪ

11:19 AM Oct 04, 2021 | Team Udayavani |

ಕಲಬುರಗಿ: ಚುನಾವಣೆ ಅಂದರೆ ಬಿಜೆಪಿಗೆ ಗೆಲುವು ಖಚಿತ ಎನ್ನುವಂತೆ ಆಗಿದೆ. ಹೀಗಾಗಿಯೇ ಚುನಾವಣೆ ಬಂದರೆ ಬಿಜೆಪಿಗೆ ಖುಷಿ, ಕಾಂಗ್ರೆಸ್ ಗೆ ನಡುಕ ಉಂಟಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಎರಡೂ ಕ್ಷೇತ್ರಗಳನ್ನೂ ನಾವು ಗೆದ್ದೆ ಗೆಲ್ಲುತ್ತೇವೆ ಎಂದರು.

ಇದನ್ನೂ ಓದಿ:ಸಚಿನ್ ಗೆ ಸಂಕಷ್ಟ: ತೆರಿಗೆ ವಂಚನೆ ಆರೋಪ, ಪಂಡೋರಾ ಪೇಪರ್ಸ್ ನಲ್ಲಿ ಕ್ರಿಕೆಟ್ ದಿಗ್ಗಜನ ಹೆಸರು

ಸಾಯುವ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಪೀಸ್-ಪೀಸ್ ಆಗಿದೆ. ಯಾರೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದೇ ಇಲ್ಲ. ಅದರಲ್ಲೂ ಬಿಜೆಪಿಯ ಶಾಸಕರು ಸಿಂಹ ಇದ್ದಂಗೆ.‌ ನಮ್ಮ ಶಾಸಕರೆಲ್ಲ ಚಿನ್ನದ ಗಟ್ಟಿ ಅಂತೆ ಇದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next