Advertisement

ಟ್ವೀಟ್‌ ಮಾಡಿ ಡಿಲೀಟ್‌ ಮಾಡಿದ ತ.ನಾಡು ಸಿಎಂ

12:56 AM Jun 06, 2019 | Team Udayavani |

ಚೆನ್ನೈ: ತಮಿಳನ್ನು ದೇಶದ ಇತರ ರಾಜ್ಯಗಳಲ್ಲಿ ಮೂರನೇ ಆಯ್ಕೆಯ ಭಾಷೆಯನ್ನಾಗಿ ದೇಶಾದ್ಯಂತ ಜಾರಿ ಮಾಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಬುಧವಾರ ಟ್ವೀಟ್‌ ಮಾಡಿ, ಬಳಿಕ ಡಿಲೀಟ್‌ ಮಾಡಿದ್ದಾರೆ.

Advertisement

ಬೆಳಗ್ಗೆ 10.58ಕ್ಕೆ ಟ್ವೀಟ್‌ ಮಾಡಿ ಪ್ರಧಾನಿಯವರನ್ನು ಒತ್ತಾ ಯಿಸಿದ್ದ ಪಳನಿಸ್ವಾಮಿ ಅತ್ಯಂತ ಹಳೆಯ ಭಾಷೆಯಾಗಿರುವ ತಮಿಳನ್ನು ಇತರ ರಾಜ್ಯಗಳಲ್ಲಿ 3ನೇ ಆಯ್ಕೆಯ ಭಾಷೆಯ ನ್ನಾಗಿ ಮಾಡಬೇಕು. ಇಂಥ ಕ್ರಮ ಕೈಗೊಂಡರೆ ಉತ್ತಮ. ಈ ಬಗ್ಗೆ ಪ್ರಧಾನಿಗೆ ಮನವಿ ಮಾಡುತ್ತೇನೆ ಎಂದು ಬರೆದು ಕೊಂಡಿದ್ದರು. ತಮ್ಮ ವೈಯಕ್ತಿಕ ಟ್ವೀಟ್‌ ಖಾತೆಯಿಂದ ಈ ಟ್ವೀಟ್‌ ಮಾಡಿದ್ದಾರೆ. ಮಧ್ಯಾಹ್ನ 3 ಗಂಟೆಯ ವೇಳೆ ಅದನ್ನು ಯಾವುದೇ ಸ್ಪಷ್ಟನೆ ನೀಡದೆ ಡಿಲೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next