Advertisement

ಪ್ರಧಾನಿ ಮೋದಿಗೆ ನಮಿಸಿದ ಸಚಿವ ಕೆ.ಗೋಪಾಲಯ್ಯ

10:46 AM May 07, 2023 | Team Udayavani |

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ತಮ್ಮ ಕ್ಷೇತ್ರದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ನಡೆಸಿದ ಸ್ಥಳಕ್ಕೆ ತೆರಳಿ ಹರ್ಷ ವ್ಯಕ್ತಪಡಿಸಿದರು.

Advertisement

ರೋಡ್‌ ಶೋಗೆ ನೆರೆದಿದ್ದ ಕಾರ್ಯಕರ್ತರು ಹಾಗೂ ಜನ ಸಾಮಾನ್ಯರ ಜತೆಗೆ ಮಾತನಾಡಿ ಮತಯಾಚಿಸಿದರು. ರೋಡ್‌ ಶೋಗೂ ಮೊದಲೇ ತಮ್ಮ ಕ್ಷೇತ್ರದ ಕೆಲವು ಕಡೆ ಬಿರುಸಿನ ಮತಯಾಚಿಸಿದರು.ರೋಡ್‌ ಶೋನಲ್ಲಿ ಜೈಕಾರ ಕೂಗಿ ಕಾರ್ಯಕರ್ತರ ಜತೆಗೆ ಮೋದಿಗೆ ನಮನ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋನಿಂದ ನಮಗೆ ಮತ್ತಷ್ಟು ಶಕ್ತಿ ಹೆಚ್ಚಿದಂತಾಗಿದೆ. ಈ ಬಾರಿ ಗೆಲುವು ಖಚಿತವಾಗಿ ಸಿಗಲಿದೆ. ನಮ್ಮ ಕ್ಷೇತ್ರದ ಕಾರ್ಯಕರ್ತರಲ್ಲೂ ಕೂಡ ಮೋದಿ ರೋಡ್‌ ಶೋನಿಂದ ಪ್ರೋತ್ಸಾಹ ದೊರಕಿದಂತಾಗಿದೆ. ಹತ್ತಿರದಿಂದ ಮೋದಿ ಅವರನ್ನು ನೋಡುವ ಅವಕಾಶ ಸಿಕ್ಕಿದೆ. ಮೋದಿ ಸರ್ವಶ್ರೇಷ್ಠ ನಾಯಕ ಅವರ ನಿಲುವುಗಳು, ಜನರ ಅಭಿವೃದ್ಧಿಗಾಗಿ ಅವರು ಶ್ರಮಿಸಿರುವ ರೀತಿ ನಿಜ್ಜಕ್ಕೂ ಶ್ಲಾಘನೀಯ ಎಂದು ಕೊಂಡಾಡಿದರು.

ಕೋವಿಡ್‌ ಸಂಕಷ್ಟದಲ್ಲಿ ಫ‌ುಡ್‌ ಕಿಟ್‌, ಔಷಧ ಕಿಟ್‌ ಹಾಗೂ ಆಕ್ಸಿಜನ್‌ ಸೇರಿದಂತೆ ಹಲವು ರೀತಿಯ ಸಹಾಯ
ಮಾಡಿದ್ದೇನೆ. ಬುಧವಾರ ತಾವೆಲ್ಲರೂ ತಪ್ಪದೆ ಬಿಜೆಪಿ ಚಿಹ್ನೆ ಕಮಲದ ಗುರುತಿಗೆ ಮತ ಚಲಾಯಿಸುವ ಮೂಲಕ
ನಮ್ಮನ್ನ ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಮಾಡಲಿಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ನರೇಂದ್ರಬಾಬು, ಬಿಬಿಎಂಪಿ ಮಾಜಿ ಸದಸ್ಯ ಎಂ.ಮಹದೇವ್‌, ಸ್ಥಳೀಯ
ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next