Advertisement

ಕಾಂಗ್ರೆಸ್ ನಲ್ಲಿದ್ದಿದ್ದರೆ ಸಿಂದಿಯಾ ಮುಖ್ಯಮಂತ್ರಿಯಾಗಬಹುದಿತ್ತು : ರಾಹುಲ್ ಗಾಂಧಿ

05:36 PM Mar 08, 2021 | Team Udayavani |

ನವ ದೆಹಲಿ : ಕಾಂಗ್ರೆಸ್ ಜೊತೆಯಲ್ಲಿದ್ದಿದ್ದರೆ ಜ್ಯೋತಿರಾದಿತ್ಯ ಸಿಂದಿಯಾ ಮುಖ್ಯಮಂತ್ರಿಯಾಗಬಹುದಿತ್ತು, ಆದರೇ, ಈಗ ಬಿಜೆಪಿಯಲ್ಲಿ ಮೂಲೆ ಗುಂಪಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ಹೇಳಿದ್ದಾರೆ.

Advertisement

ಪಕ್ಷದ ಯುವ ಕಾರ್ಯಕರ್ತರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಸಿಂದಿಯಾ ಕಾಂಗ್ರೆಸ್ ನಲ್ಲಿ ಇದ್ದಿದ್ದರೇ ಮುಖ್ಯಮಂತ್ರಿಯಾಗಬಹುದಿತ್ತು, ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆಯನ್ನು ಬಲಪಡಿಸುವ ಆಯ್ಕೆಯನ್ನು ಕೂಡ ಅವರು ಹೊಂದಿದ್ದರು. ನಾನು ಕೂಡ ಖುದ್ದಾಗಿ ಹೇಳಿದ್ದೆ. ಆದರೇ ಅವರು ಇನ್ನೊಂದು ಮಾರ್ಗವನ್ನು ಕಂಡುಕೊಂಡರು ಎಂದು ಗಾಂಧಿ ಹೇಳಿದ್ದಾರೆ.

ಓದಿ : ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ : ಯಡಿಯೂರಪ್ಪ

“ಬರೆದಿಟ್ಟುಕೊಳ್ಳಿ, ಬಿಜೆಪಿಯಿಂದ ಸಿಂದಿಯಾ ಮುಖ್ಯಮಂತ್ರಿ ಎಂದಿಗೂ ಆಗುವುದಿಲ್ಲ. ಅದಕ್ಕಾಗಿ ಅವರು ಮತ್ತೆ ಇಲ್ಲಿಗೆ ಹಿಂತಿರುಗಲೇ ಬೇಕಾಗುತ್ತದೆ” ಎಂದಿದ್ದಾರೆ.

ಆರ್ ಎಸ್ ಎಸ್ ಸಿದ್ಧಾಂತದ ವಿರುದ್ಧ ಹೋರಾಡಿ, ನೀವು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಗಾಂಧಿ ಪಕ್ಷದ ಯುವ ಕಾರ್ಯಕರ್ತರಿಗೆ ಸಲಹೆ ನೀಡಿದರು.

Advertisement

ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಜ್ಯೋತಿರಾದಿತ್ಯ ಸಿಂದಿಯಾ ಕಾಂಗ್ರೆಸ್ ಗೆ ರಾಜಿನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಓದಿ : ಮದುವೆಯಾಗುತ್ತೀಯಾ ಎಂದು ಕೇಳಿರಲಿಲ್ಲ..! : ಬೋಬ್ಡೆ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next