Advertisement

ಪಾದರಕ್ಷೆ ಧರಿಸುವಂತೆ ಮಾಡಿದ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ

06:32 PM Dec 26, 2022 | Team Udayavani |

ಗ್ವಾಲಿಯರ್‌ ಕ್ಷೇತ್ರದ ಶಾಸಕ ಮತ್ತು ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮ್ನ ಸಿಂಗ್‌ ತೋಮರ್‌ ಕೊನೆಗೂ ಪಾದರಕ್ಷೆಗಳನ್ನು ಧರಿಸಲು ಒಪ್ಪಿಕೊಂಡಿದ್ದಾರೆ.

Advertisement

ಅದೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬಲವಂತಕ್ಕೆ. ತಮ್ಮ ಕ್ಷೇತ್ರದಲ್ಲಿ ಇರುವ ರಸ್ತೆಗಳನ್ನು ದುರಸ್ತಿ ಮಾಡಲು ಅಸಾಧ್ಯವಾಗಿದೆ. ಆ ಕೆಲಸ ಪೂರ್ಣವಾಗುವ ವರೆಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ಅ.20ರಂದು ಕ್ಷೇತ್ರದ ಪ್ರವಾಸ ನಡೆಸುತ್ತಿದ್ದ ವೇಳೆ ರಸ್ತೆಗಳು ಸಮರ್ಪಕವಾಗಿ ಇರದೇ ಇದ್ದದ್ದು ಗಮನಕ್ಕೆ ಬಂದಿತ್ತು.

“ನನ್ನ ಕ್ಷೇತ್ರದ ರಸ್ತೆಗಳು ದುರಸ್ತಿಯಾಗುವ ವರೆಗೆ ಪಾದರಕ್ಷೆ ಧರಿಸುವುದಿಲ್ಲ’ ಎಂದು ಆ ದಿನ ಪ್ರತಿಜ್ಞೆ ಮಾಡಿದ್ದರು.

ಇದೀಗ ರಸ್ತೆಗಳು ದುರಸ್ತಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಪಾದರಕ್ಷೆ ಧರಿಸುವಂತೆ ಮನವೊಲಿಸಿ, ಯಶಸ್ವಿಯಾಗಿದ್ದಾರೆ. ಅದರ ಫೋಟೋಗಳು, ವಿಡಿಯೋಗಳು ವೈರಲ್‌ ಆಗಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next