Advertisement

ನಿದಾ ಖಾನ್‌ ತ್ರಿವಳಿ ತಲಾಕ್‌ ಅಸಿಂಧು: ಬರೇಲಿ ಕೋರ್ಟ್‌

07:05 PM Jul 18, 2018 | udayavani editorial |

ಲಕ್ನೋ : ನಿದಾ ಖಾನ್‌ ಗೆ ನೀಡಲಾಗಿರುವ ತ್ರಿವಳಿ ತಲಾಕ್‌ ಅಸಿಂಧುವೆಂದು ಬರೇಲಿಯ ಕೋರ್ಟ್‌ ಇಂದು ಬುಧವಾರ ಘೋಷಿಸಿದೆ; ಆ ಪ್ರಕಾರ ಆಕೆಯ ಪತಿ ಶಿರೇನ್‌ ಮತ್ತು ಆತನ ಮನೆಯವರ ವಿರುದ್ಧ  ಈಗಿನ್ನು ಕೌಟುಂಬಿಕ ಹಿಂಸೆ ಪ್ರಕರಣದ ತನಿಖೆ ನಡೆಸುವಂತೆ ಕೋರ್ಟ್‌ ಆದೇಶಿಸಿದೆ. 

Advertisement

ಕೋರ್ಟ್‌ ಮುಂದಿದ್ದ ಅನೇಕ ತ್ರಿವಳಿ ತಲಾಕ್‌ ಕೇಸುಗಳಲ್ಲಿ ಒಂದಾಗಿರುವ ಈ ಪ್ರಕರಣದಲ್ಲಿ ನಿದಾ ಖಾನ್‌ ಗೆ ಮಹತ್ತರ ವಿಜಯ ದೊರಕಿದಂತಾಗಿದೆ. 

ನಿದಾ ಖಾನ್‌ ತ್ರಿವಳಿ ತಲಾಕ್‌ ಪ್ರಕರಣದಲ್ಲಿ ಆಕೆಯ ಪತಿ ಶಿರೇನ್‌  ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅತ್ಯಂತ ಸ್ಪಷ್ಟವಾಗಿ ತಿರಸ್ಕರಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್‌ ಜು.27ಕ್ಕೆ ನಿಗದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next