Advertisement

“ಕಪ್ಪು ಕೋಟು ಹಾಕಿದ್ದಕ್ಕೆ ಅರ್ಜಿ ಮಾನ್ಯವಿಲ್ಲ’

01:04 AM Sep 15, 2021 | Team Udayavani |

ಹೊಸದಿಲ್ಲಿ: “ವಕೀಲರಿಂದ ಬೋಗಸ್‌ ಪಿಐಎಲ್‌ ಸಲ್ಲಿಸುವುದನ್ನು ನಿಲ್ಲಿಸುವ ಕಾಲ ಬಂದಿದೆ. ನೀವು ಕಪ್ಪು ಕೋಟ್‌ ಹಾಕಿದ್ದೀರಿ ಎಂಬ ಮಾತ್ರಕ್ಕೆ ನಿಮ್ಮ ವಾದವನ್ನು ಮಾನ್ಯ ಮಾಡಲಾಗದು’ ಎಂದು ಸುಪ್ರೀಂ ಕೋರ್ಟ್‌, ವಕೀಲರೊಬ್ಬರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

Advertisement

ಕೊರೊನಾ ಅಥವಾ ಮತ್ಯಾ­ವುದೇ ಕಾರಣಗಳಿಂದಾಗಿ 60 ವರ್ಷ ದಾಟುವ ಮುನ್ನವೇ ನಿಧನ ಹೊಂದಿದ ವಕೀಲರ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡ­ಬೇಕೆಂದು ಕೋರಿ, ಪ್ರದೀಪ್‌ ಕುಮಾರ್‌ ಯಾದವ್‌ ಎಂಬ ವಕೀಲರು ಸಲ್ಲಿಸಿದ್ದ ಸಾರ್ವ­ಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ| ಡಿ.ವೈ. ಚಂದ್ರಚೂಡ್‌ ವಜಾಗೊಳಿಸಿದ್ದಾರೆ. ಈ ಅರ್ಜಿಯನ್ನು “ಪ್ರಚಾರ ಹಿತಾಸಕ್ತಿ ಅರ್ಜಿ’ಯೆಂದು ಅವರು ಬಣ್ಣಿಸಿದ್ದಾರೆ.

“60 ವರ್ಷದೊಳಗೆ ನಿಧನ ಹೊಂದಿದ ವಕೀಲರ ಕುಟುಂಬಕ್ಕೆ ಪರಿಹಾರ ಸಿಗಬೇಕು. ಸರಕಾರ ಬೇರೆ ಕ್ಷೇತ್ರಗಳ ಉದ್ಯೋಗಿಗಳಿಗೆ ನೀಡುವ ಸೌಲಭ್ಯ ಇಲ್ಲಿಯೂ ವಿಸ್ತರಿಸಬೇಕು’ ಎಂದು ವಕೀಲರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next