Advertisement

ಜೂ. ಕ್ರಿಕೆಟ್‌ ಆಯ್ಕೆ ಸಮಿತಿಗೆ ಶರತ್‌ ಅಧ್ಯಕ್ಷ

12:44 AM Sep 18, 2021 | Team Udayavani |

ಹೊಸದಿಲ್ಲಿ : ತಮಿಳುನಾಡಿನ ಮಾಜಿ ಎಡಗೈ ಬ್ಯಾಟ್ಸ್‌ಮನ್‌ ಶ್ರೀಧರನ್‌ ಶರತ್‌ ಅವರನ್ನು ಭಾರತದ ಜೂನಿಯರ್‌ ಕ್ರಿಕೆಟ್‌ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದೇಶಿ ಕ್ರಿಕೆಟ್‌ ಋತು ಆರಂಭಗೊಳ್ಳಲು ಕೇವಲ ಒಂದು ವಾರ ಇರುವಾಗ ಬಿಸಿಸಿಐ ಈ ಆಯ್ಕೆ ಸಮಿತಿಯನ್ನು ರಚಿಸಿತು.

Advertisement

ಆಯ್ಕೆ ಮಂಡಳಿಯ ಉಳಿದ ಸದಸ್ಯ ರೆಂದರೆ ಪಂಜಾಬ್‌ನ ಕಿಶನ್‌ ಮೋಹನ್‌ (ಉತ್ತರ ವಲಯ), ಬಂಗಾಲದ ರಣದೇಬ್‌ ಬೋಸ್‌ (ಪೂರ್ವ ವಲಯ), ಗುಜರಾತ್‌ನ ಪತಿಕ್‌ ಪಟೇಲ್‌ (ಪಶ್ಚಿಮ ವಲಯ) ಹಾಗೂ ಮಧ್ಯಪ್ರದೇಶದ ಹರ್ವಿಂ ದರ್‌ ಸಿಂಗ್‌ ಸೋಧಿ (ಮಧ್ಯ ವಲಯ).

ಅಂಡರ್‌-19 ವಿಶ್ವಕಪ್‌
ಮುಂದಿನ ವರ್ಷ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ನೂತನ ಕಿರಿಯ ಸದಸ್ಯರನ್ನು ಆರಿಸುವುದು ಈ ಸಮಿತಿಯ ಮೇಲಿರುವ ದೊಡ್ಡ ಜವಾಬ್ದಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next