Advertisement

ಬಸವನಾಡಿಗೆ ಜೆಪಿ ನಡ್ಡಾ ಆಗಮನಕ್ಕೆ ಕ್ಷಣ ಗಣನೆ: ಸಿದ್ಧೇಶ್ವರಶ್ರೀ ಆಶ್ರಮಕ್ಕೆ ಭೇಟಿ

12:14 PM Jan 21, 2023 | keerthan |

ವಿಜಯಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ಅವರು ಪಕ್ಷ ಸಂಘಟನೆಗಾಗಿ ಶನಿವಾರ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಗರಕ್ಕೆ ಬರುತ್ತಲೇ   ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

Advertisement

ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಶ್ರಮದಲ್ಲಿರುವ ಪ್ರಣವ ಮಂಟಪ ದರ್ಶನ ಮಾಡಲಿದ್ದಾರೆ. ಬಳಿಕ ಸಿದ್ದೇಶ್ವರ ಶ್ರೀಗಳ ಗುರುಗಳಾದ ಮಲ್ಲಿಕಾರ್ಜುನ ಶ್ರೀಗಳ ಕರ್ತೃ ಗದ್ದುಗೆಯ ಪ್ರಣವ ಮಂಟಪಕ್ಕೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ:ಮಹಿಳಾ ಐಪಿಎಲ್ ಗೆ ಭಾರಿ ಬೇಡಿಕೆ: ತಂಡ ಖರೀದಿಸಲು ಮುಂದೆ ಬಂದ 30 ಕಂಪನಿಗಳು

ಬಳಿಕ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರ ಇಟ್ಟು ಮೆರವಣಿಗೆ ನಡೆಸಿದ ಮಂಟಪ ವೀಕ್ಷಣೆ ಮಾಡಲಿದ್ದಾರೆ. ನಂತರ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ನಡೆಸಿದ ಸ್ಥಳದ ದರ್ಶನ ಮಾಡಲಿದ್ದಾರೆ.

ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡುವ ನಡ್ಡಾ ಅವರಿಗೆ ಆಶ್ರಮದ ಸಾಧಕರು ಸತ್ಕರಿಸಿ, ಪತಂಜಲಿ ಯೋಗ ಸೂತ್ರ, ನಾರದ ಸೂತ್ರ ಹಾಗೂ ಶಿವಸೂತ್ರ ಗ್ರಂಥಗಳನ್ನು ಉಡುಗೊರೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Advertisement

ನಡ್ಡಾ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಅಶ್ವತ್ಥನಾರಾಯಣ ಇತರರು ಉಪಸ್ಥಿತಿ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next