Advertisement

ಬೈಕ್‌ –ಕಾರು ಢಿಕ್ಕಿಯಲ್ಲಿ ಪತ್ರಕರ್ತನ ಸಾವು: ಕೊಲೆ ಕೃತ್ಯದ ಆರೋಪ

12:09 PM Mar 26, 2018 | udayavani editorial |

ಆರಾ, ಬಿಹಾರ : ಭೋಜಪುರ ಜಿಲ್ಲೆಯಲ್ಲಿ ಬೈಕಿಗೆ ಎಸ್‌ಯುವಿ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳೀಯ ಪತ್ರಕರ್ತ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

Advertisement

ಪತ್ರಕರ್ತನ ಕುಟುಂಬದವರು, “ಇದೊಂದು ಕೊಲೆ ಕೃತ್ಯ; ಇದರ ಹಿಂದೆ ಗ್ರಾಮದ ಮಾಜಿ ಮುಖ್ಯಸ್ಥ ಇದ್ದಾನೆ’ ಎಂದು ದೂರಿದ್ದಾರೆ.

ಪತ್ರಕರ್ತ ನವೀನ್‌ ಮತ್ತು ಆತನ ಸ್ನೇಹಿತ ವಿಜಯ್‌ ಸಿಂಗ್‌ ನಿನ್ನೆ ಭಾನುವಾರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದಾಗ ನಹಸೀ ಗ್ರಾಮ ಸಮೀಪ ಅವರ ಬೈಕಿಗೆ ಎಸ್‌ಯುವಿ ಕಾರು ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಇಬ್ಬರೂ ಮೃತಪಟ್ಟರು.

ಅಪಘಾತ ಕಂಡ ಸ್ಥಳೀಯರು ಎಸ್‌ಯುವಿ ಕಾರಿನಲ್ಲಿದ್ದವರ ಮೇಲೆ ಕೋಪಾವೇಶ ತೋರಿದರಾದರೂ ಕಾರೊಳಗಿದ್ದವು ಅದಾಗಲೇ ಪರಾರಿಯಾಗಿದ್ದರು. ಪರಿಣಾಮವಾಗಿ ಉದ್ರಿಕ್ತ ಗುಂಪು ಕಾರಿಗೆ ಬೆಂಕಿ ಹಚ್ಚಿತು ಎಂದು ಭೋಜಪುರ ಪೊಲೀಸ್‌ ಸುಪರಿಂಟೆಂಡೆಂಟ್‌ ಅವಕಾಶ್‌ ಕುಮಾರ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next