Advertisement

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

01:18 AM May 03, 2024 | Team Udayavani |

ಧಾರವಾಡ : ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಆದರ್ಶ ಮತ್ತು ಮಾದರಿ ರಾಜಕಾರಣಿ ಪ್ರಹ್ಲಾದ ಜೋಶಿ ಅವರನ್ನು ಧಾರವಾಡ ಲೋಕಸಭಾ ಕ್ಷೇತ್ರದ ಜನತೆ ಗೆಲ್ಲಿಸಿ ಕಳುಹಿಸಬೇಕು ಎಂದು ಮಹಾರಾಷ್ಟ್ರ ಮುಖ್ಯ ಮಂತ್ರಿ ಏಕನಾಥ ಶಿಂಧೆ ಮನವಿ‌ ಮಾಡಿದರು.

Advertisement

ನಗರದ ಶ್ರೀ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯ ಮೈದಾನದಲ್ಲಿ ಧಾರವಾಡ ಲೋಕಸಭಾದ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮೊದಲು ಮರಾಠಿಯಲ್ಲಿಯೇ ಭಾಷಣ ಆರಂಭಿಸಿ ಆ ಬಳಿಕ ಹಿಂದಿಯಲ್ಲಿ ಅವರು ಮಾತನಾಡಿದರು.

ಶಿವಾಜಿ ಮತ್ತು ಕನ್ನಡಿಗರಿಗೆ ಅವಿನಾಭಾವ ಸಂಬಂಧವಿದ್ದು, ಶಿವಾಜಿ ಮಹಾರಾಜರು ಹಿಂದೂತ್ವದ ಜತೆಗೆ ದೇಶ ರಕ್ಷಣೆ ಮಾಡಿದಂತೆ ಪ್ರದಾನಿ ನರೇಂದ್ರ ಮೋದಿ ಕೂಡ ಮಾಡಿದ್ದಾರೆ. ಈ ಕಾರಣದಿಂದಲೇ ಜಗತ್ತು ಇಂದು ಭಾರತವನ್ನು ಗೌರವಿಸುವಂತಾಗಿದೆ. ಹೀಗಾಗಿ ದೇಶದ ಒಳಿತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲೇಬೇಕು. ಮೋದಿ ಅವರಿಂದಲೇ ಪಾಕಿಸ್ತಾನ ಸೇರಿದಂತೆ ಶತ್ರು ರಾಷ್ಟ್ರಗಳು ತಣ್ಣಗಿವೆ. ಅದಕ್ಕಾಗಿ ಮೋದಿ ಗೆಲ್ಲಬೇಕಿದ್ದು, ಅದಕ್ಕೆ ಜೋಶಿ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳೆಲ್ಲರೂ ಗೆಲ್ಲಲೇಬೇಕು ಎಂದು ಮನವಿ ಮಾಡಿದರು.

ಇನ್ನು ಕಳೆದ ನಾಲ್ಕು ಚುನಾವಣೆಯಲ್ಲಿಯೂ ಭಾರೀ ಅಂತರದಿಂದ ಗೆಲ್ಲುತ್ತಲೇ ಬಂದಿರುವ ಪ್ರಹ್ಲಾದ ಜೋಶಿ ಅವರನ್ನು ಮತ್ತೊಂದು ಬಾರಿ ಗೆಲ್ಲಿಸಿರಿ. ಕೇಂದ್ರದಲ್ಲಿ ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಶಿ ಮಾತ್ರ ಶುದ್ದ, ಸ್ವಚ್ಚವಾಗಿದ್ದಾರೆ. ಈ ಹಿಂದಿನವರಂತೂ ಮೈಗೆ ಮಸಿ ಬಳಿಸಿಕೊಂಡಿದ್ದು ಮರೆಯುವ ಹಾಗಿಲ್ಲ. ಹೀಗಾಗಿ ಈಗ ಮತ್ತೆ ಜೋಶಿ ಗೆದ್ದು ಮತ್ತೆ ಮಂತ್ರಿಯಾಗಲಿದ್ದು, ಹೀಗಾಗಿ ಜಿಲ್ಲೆಯ ಅಷ್ಟೇ ಅಲ್ಲದೇ ದೇಶದ ಅಭಿವೃದ್ದಿಗೆ ಕೈ ಜೋಡಿಸಿರಿ ಎಂದರು.

ವಿರೋಧಿಗಳು ಎಷ್ಟೋ ಬಾಯಿ ಬಡೆದಕೊಂಡರೂ ಗೆಲ್ಲುವುದು ಬಿಜೆಪಿ ಮತ್ತು ಮೋದಿ. ಆದರೆ ಎಷ್ಟೇ ಬಾರಿ ರಾಹುಲ್ ಗಾಂಧಿಯನ್ನು ಹೊಸ ಅವತಾರದಲ್ಲಿ ಲಾಂಚ್ ಮಾಡಿದರೂ ಮೇಲಕ್ಕೆ ಏಳುತ್ತಿಲ್ಲ. ಪಪ್ಪು ಫೇಲ್ ಹೋಗಯಿ ಎಂದು ಟಾಂಗ್ ನೀಡಿದ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜತೆ ಶಿವಸೇನಾ ಸರಕಾರ ಪಲ್ಟಿ ಮಾಡಬೇಕಾಯಿತು. ಮುಂದಿನ ದಿನಗಳಲ್ಲಿ ಇಲ್ಲಿಯೂ ಹಾಗೇ ಆಗಬಹುದು ಎಂದರು.

Advertisement

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು, ಆದರೆ ಅಭಿವೃದ್ದಿ ಕಾರ್ಯಗಳೇ ಮಾಡುತ್ತಿಲ್ಲ. ಈಗ ನಮ್ಮ ಬಳಿ ಹಣವಿಲ್ಲ ಅನ್ನುತ್ತಿದ್ದಾರೆ. ಕರ್ನಾಟಕ ಸರಕಾರವು ರಾವಣ ರೂಪದಲ್ಲಿ ಇದ್ದು, ಈ ಸರಕಾರ ಕಿತ್ತು ಹಾಕಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕೂಡ
ಆಗಬಹುದು. ಇದು ಈ ಚುನಾವಣೆಯ ಬಳಿಕ ಗೊತ್ತಾಗಲಿದೆ ಎಂದರು.

ಪ್ರಹ್ಲಾದ ಜೋಶಿ ಮಾತನಾಡಿ ವಿಶ್ವದಲ್ಲಿ ಭಾರತ ಇನ್ನಷ್ಟು ಉನ್ನತ ಮಟ್ಟಕ್ಕೆ ಏರಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದು, ಅದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು. ಅವರ ಮಾರ್ಗದರ್ಶನದಲ್ಲಿ ಧಾರವಾಡ ಜಿಲ್ಲೆಯನ್ನು ಕೂಡ ದೇಶದಲ್ಲಿ ಉನ್ನತಮಟ್ಟಕ್ಕೆ ಒಯ್ಯುತ್ತೇನೆ. ಇದಕ್ಕಾಗಿ ಈ ಸಲವು ಮತದಾರರು ಆರ್ಶೀವಾದ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ ದೇಸಾಯಿ, ಸಂಜಯ ಕಪಟಕರ ಸೇರಿದಂತೆ ಹಲವರು ಇದ್ದರು.

ಶಿಂಧೆ ಕರೆಸಿದ್ದು ಕನ್ನಡಿಗರಿಗೆ ಅವಮಾನ: ಲಾಡ್‌
ಕನ್ನಡ ನಾಡು-ನುಡಿಗೆ ಹಾಗೂ ಕಳಸಾ ಬಂಡೂರಿ, ಮಹದಾಯಿ ಯೋಜನೆಗೆ ಸದಾ ಅಡ್ಡಗಾಲು ಹಾಕುವ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು ತಮ್ಮ ಪರ ಮತ ಕೇಳಲು ಕರೆಸಿರುವುದು ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next