Advertisement

ಮಂಜಿನ ನಡುವೆ ಮರೆಯಾದ ಜೋಗ ಜಲಪಾತ : ಪ್ರವಾಸಿಗರಿಗೆ ನಿರಾಸೆ

08:30 PM Jul 16, 2022 | Team Udayavani |

ಶಿವಮೊಗ್ಗ: ವಿಶ್ವ ಪ್ರಸಿದ್ಧ ಜೋಗ ಜಲಪಾತ ನೋಡಲು ಶನಿವಾರ ಆಗಮಿಸಿದ್ದ ಪ್ರವಾಸಿಗರಿಗೆ ಮಂಜು, ಮಳೆ ಕಾರಣದಿಂದ ನಿರಾಸೆ ಮೂಡಿಸಿತು.

Advertisement

ಶುಕ್ರವಾರ ಬಿಡುವು ನೀಡಿದ್ದ ಮಳೆ ಶನಿವಾರ ಮಲೆನಾಡಲ್ಲಿ ಅಬ್ಬರಿಸುತ್ತಿದ್ದು ಜೋಗ ಜಲಪಾತ ಮಂಜಿನ ನಡುವೆ ಮರೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ದರ್ಶನ ನೀಡಿ ಪ್ರವಾಸಿಗರಿಗೆ ಪುಳಕ ನೀಡಿತು. ಹಲವರು ಹರ್ಷೋದ್ಘಾರ ವ್ಯಕ್ತಪಡಿಸಿದ್ದು ಕಂಡು ಬಂತು.

ಜಲಪಾತದ ಜತೆ ಫೋಟೋ ತೆಗೆಸಿಕೊಳ್ಳಬೇಕೆಂದು ಕಾದಿದ್ದವರು ನಿರಾಸೆಯಿಂದಲೆ ಊರಿನ ಕಡೆ ಪ್ರಯಾಣ ಬೆಳೆಸಬೇಕಾಯಿತು.

ಇದನ್ನೂ ಓದಿ : ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ ಪಶ್ಚಿಮ ಬಂಗಾಳದ ರಾಜ್ಯಪಾಲ ಧನಕರ್

Advertisement
Advertisement

Udayavani is now on Telegram. Click here to join our channel and stay updated with the latest news.

Next