Advertisement

ಜ್ಞಾನವಾಪಿ ಕೊಠಡಿ ಇದುವೇ! ಶೃಂಗಾರ್‌ ಕಾಂಪ್ಲೆಕ್ಸ್‌ನ ಕೆಳಭಾಗದಲ್ಲಿರುವ ಕೋಣೆಯ ಚಿತ್ರ

09:18 AM May 22, 2022 | Team Udayavani |

ವಾರಾಣಸಿ: ಇಲ್ಲಿನ ಜ್ಞಾನವಾಪಿ ಮಸೀದಿಯಲ್ಲಿ ಇತ್ತೀಚೆಗೆ ನಡೆದ ಸರ್ವೇ ವೇಳೆ ಶಿವಲಿಂಗ ಪತ್ತೆಯಾದ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಇದರ ನಡುವೆಯೇ, “ಆಜ್‌ ತಕ್‌’ ಹಾಗೂ “ಇಂಡಿಯಾ ಟುಡೇ’ ವಾಹಿನಿ­ಗಳು, ಕೋರ್ಟ್‌ ಕಮೀಷನ್‌ ಸರ್ವೇ ನಡೆಸಿದ ಜ್ಞಾನವಾಪಿ ಮಸೀದಿಯ ಕೆಳಮಹಡಿಯ­ಲ್ಲಿರುವ ಕೋಣೆಯ ಫೋಟೋಗಳು ಹಾಗೂ ಮಸೀದಿಯ ಸರ್ವೇ ನಕ್ಷೆಗಳನ್ನು ಪ್ರಕಟಿಸಿವೆ.

Advertisement

ಈ ಕೋಣೆಯು ಮಸೀದಿಯ ಶೃಂಗಾರ್‌ ಕಾಂಪ್ಲೆಕ್ಸ್‌ನ ಕೆಳಭಾಗದಲ್ಲಿದೆ. ಪ್ರತೀ ವರ್ಷ, ಜ್ಞಾನವಾಪಿ ಮಸೀದಿ ಆವರಣದಲ್ಲಿ “ಶ್ರೀ ರಾಮಚರಿತ ಮಾನಸ ವಾಚನ ಪಾಠ ಮಹಾ­ಯಜ್ಞ ಸಮಿತಿ’ ವತಿಯಿಂದ, “ರಾಮಚರಿತ ಮಾನಸ’ ಪಠನ ಕಾರ್ಯಕ್ರಮ ಹಮ್ಮಿಕೊಳ್ಳಲಾ­ಗುತ್ತದೆ. ಆ ಸಂದರ್ಭದಲ್ಲಿ ಬಿದಿರು ಬೊಂಬು, ಶೀಟ್‌ಗಳಿಂದ ಟೆಂಟ್‌ಗಳನ್ನು ನಿರ್ಮಿಸಲಾ­ಗುತ್ತದೆ.

ಕಾರ್ಯಕ್ರಮ ಮುಗಿದ ಅನಂತರ ಬೊಂಬುಗಳು, ಶೀಟ್‌ಗಳನ್ನು ಹಾಗೂ ಇನ್ನಿತರ ಸಾಮಗ್ರಿಗಳನ್ನು ಇದೇ ಕೊಠಡಿಯಲ್ಲಿ ಇಡಲಾ­ಗುತ್ತದೆ ಎಂದು ಫೋಟೋ ಸಹಿತ ವಿವರಿಸ­ಲಾಗಿದೆ.

ಸದ್ಯ ಪ್ರಕರಣದ ವಿಚಾರಣೆಯನ್ನು ವಾರಾಣಸಿಯ ಜಿಲ್ಲಾ ಕೋರ್ಟ್‌ನ ಅನುಭವಿ ಜಡ್ಜ್ ನಡೆಸಬೇಕು ಎಂಬ ಬಗ್ಗೆ ಶುಕ್ರವಾರ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು.

ಇದನ್ನೂ ಓದಿ : ಸೋತ ಡೆಲ್ಲಿ ಕ್ಯಾಪಿಟಲ್ಸ್‌, ಪ್ಲೇಆಫ್ ಗೇರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next