Advertisement

ಬಹುಕೋಟಿ ಹಗರಣ: ಆ.29ರಂದು ಫಾರೂಕ್‌ ಅಬ್ದುಲ್ಲ ಕೋರ್ಟಿಗೆ

04:14 PM Jul 21, 2018 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರ ಕ್ರಿಕೆಟ್‌ ಅಸೋಸಿಯೇಶನ್‌ನಲ್ಲಿ ನಡೆದಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಜಾಮೀನು ಪಡೆಯುವ ಸಲುವಾಗಿ ತನ್ನ ಮುಂದೆ ಆಗಸ್ಟ್‌ 29ರಂದು ಹಾಜರಾಗುವಂತೆ ಸ್ಥಳೀಯ ನ್ಯಾಯಾಲಯ ನ್ಯಾಶನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲ ಅವರಿಗೆ ಆದೇಶಿಸಿದೆ. 

Advertisement

ಈ ಹಗರಣದ ತನಿಖೆಯಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ಕೋರಿ ಅಬ್ದುಲ್ಲ ಅವರ ವಕೀಲರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಕೋರ್ಟ್‌ ಹೊರಡಿಸಿರುವ ಮಧ್ಯಾವಧಿ ಆದೇಶದಲ್ಲಿ “ಜಾಮೀನು ಕೋರಿಕೆಗೆ ಸಂಬಂಧಿಸಿ ಅರ್ಜಿದಾರರು ಮೊದಲಾಗಿ ಕೋರ್ಟಿನಲ್ಲಿ ಹಾಜರಾಗಬೇಕು; ಆ ಬಳಿಕವಷ್ಟೇ ಖುದ್ದು ಹಾಜರಾತಿಗೆ ವಿನಾಯಿತಿ ನೀಡುವ ವಿಷಯವನ್ನು ಪರಿಗಣಿಸಲಾಗುವುದು’ ಎಂದು ನ್ಯಾಯಾಲಯ ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next