Advertisement

ಕೋವಿಡ್ ಆತಂಕದ ನಡುವೆ ಗಡಿಯಲ್ಲಿ ಒಳನುಸುಳಲು ಯತ್ನಿಸಿದ 9 ಉಗ್ರರ ಹತ್ಯೆಗೈದ ಸೇನಾಪಡೆ

09:09 AM Apr 06, 2020 | Nagendra Trasi |

ನವದೆಹಲಿ:ಭಾರತ ಸೇರಿದಂತೆ ಜಗತ್ತಿನ ನೂರಾರು ದೇಶಗಳು ಮಾರಣಾಂತಿಕ ಕೋವಿಡ್ 19 ವೈರಸ್ ಹರಡದಿರುವಂತೆ ತಡೆಯಲು
ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಜಮ್ಮು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಗಡಿ ನುಸುಳಿ ಒಳ ಬರಲು ಪ್ರಯತ್ನಿಸಿದ್ದ
ಒಂಬತ್ತು ಉಗ್ರರನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ ಎಂದು ವರದಿ ತಿಳಿಸಿದೆ.

Advertisement

ಅಮಾಯಕ ನಾಗರಿಕರನ್ನು ಹತ್ಯೆಗೈದ ಘಟನೆಯಲ್ಲಿ ಶಾಮೀಲಾಗಿದ್ದ ನಾಲ್ವರು ಉಗ್ರರನ್ನು ದಕ್ಷಿಣ ಕಾಶ್ಮೀರದ ಬಾಟ್ಪುರಾ ಪ್ರದೇಶದಲ್ಲಿ
ಶನಿವಾರ ಹತ್ಯೆಗೈಯಲಾಗಿತ್ತು.

ಗಡಿನಿಯಂತ್ರಣ ರೇಖೆ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದ ಲಾಭ ಪಡೆದುಕೊಂಡು ಒಳನುಸುಳಲು ಯತ್ನಿಸಿದ್ದ ಐವರು
ಉಗ್ರರನ್ನು ಉತ್ತರ ಕಾಶ್ಮೀರದಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ವರದಿ ವಿವರಿಸಿದೆ.

ಉಗ್ರರು ಮತ್ತು ಸೇನಾ ಪಡೆ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಒಬ್ಬ ಯೋಧ ಹುತಾತ್ಮನಾಗಿದ್ದು, ಇಬ್ಬರು ಗಂಭೀರವಾಗಿ
ಗಾಯಗೊಂಡಿದ್ದರು. ಗಡಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತ ಹಾಗೂ ವಿಪರೀತ ಶೀತ ಗಾಳಿಯಿಂದಾಗಿ ಕಾರ್ಯಾಚರಣೆ
ನಡೆಸುವುದು ಕಠಿಣವಾಗಿದೆ. ಆದರೂ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next