Advertisement

ಶ್ರೀನಗರ ಗುಂಡಿನ ದಾಳಿ: ಪೊಲೀಸ್‌ ಪೇದೆಯನ್ನು ಕೊಂದ ಉಗ್ರರು

01:09 AM May 25, 2022 | Team Udayavani |

ಶ್ರೀನಗರ: ಶ್ರೀನಗರದ ಹೊರವಲಯದ ಸೌರಾದಲ್ಲಿ ಪೊಲೀಸ್‌ ಪೇದೆ ಮತ್ತು ಅವರ 7 ವರ್ಷದ ಮಗಳ ಮೇಲೆ ಮಂಗಳವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪೇದೆ ಸಾವನ್ನಪ್ಪಿದ್ದಾರೆ.

Advertisement

ಈ ಮೂಲಕ ಒಂದೇ ತಿಂಗಳಲ್ಲಿ ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮೂವರು ಪೊಲೀಸರು ಬಲಿಯಾದಂತಾಗಿದೆ.

ಸೈಫುಲ್ಲಾ ಖಾದ್ರಿ ಅವರು ಮಗಳನ್ನು ಟ್ಯೂಶನ್‌ಗೆ ಬಿಡಲೆಂದು ಮನೆಯಿಂದ ಹೊರಬರುತ್ತಿದ್ದಂತೆಯೇ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಅಪ್ಪ-ಮಗಳಿಬ್ಬ ರಿಗೂ ಗುಂಡು ತಗಲಿದ್ದು, ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಆದರೆ ಸೈಫುಲ್ಲಾ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಗಳು ಚೇತರಿಸಿಕೊಳ್ಳುತ್ತಿದ್ದಾಳೆ.

ಅಡಗು ತಾಣ ಪತ್ತೆ: ಅಮರನಾಥ ಯಾತ್ರೆಯ ಮೇಲೆ ದಾಳಿ ಬೆದರಿಕೆ ಹಾಕಿದ್ದ ಉಗ್ರ ಸಂಘಟನೆ ದಿ ರೆಸಿಸ್ಟೆನ್ಸ್‌ ಫ್ರಂಟ್‌ ಮತ್ತು ಲಷ್ಕರ್‌ ಅಡಗುತಾಣ ವೊಂದನ್ನು ಭದ್ರತಾ ಪಡೆಯು ಶ್ರೀನಗರದಲ್ಲಿ ಸೋಮವಾರ ಪತ್ತೆಹಚ್ಚಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next