Advertisement

ಶ್ರೀನಗರ ಗುಂಡಿನ ದಾಳಿ: ಪೊಲೀಸ್‌ ಪೇದೆಯನ್ನು ಕೊಂದ ಉಗ್ರರು

01:09 AM May 25, 2022 | Team Udayavani |

ಶ್ರೀನಗರ: ಶ್ರೀನಗರದ ಹೊರವಲಯದ ಸೌರಾದಲ್ಲಿ ಪೊಲೀಸ್‌ ಪೇದೆ ಮತ್ತು ಅವರ 7 ವರ್ಷದ ಮಗಳ ಮೇಲೆ ಮಂಗಳವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪೇದೆ ಸಾವನ್ನಪ್ಪಿದ್ದಾರೆ.

Advertisement

ಈ ಮೂಲಕ ಒಂದೇ ತಿಂಗಳಲ್ಲಿ ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮೂವರು ಪೊಲೀಸರು ಬಲಿಯಾದಂತಾಗಿದೆ.

ಸೈಫುಲ್ಲಾ ಖಾದ್ರಿ ಅವರು ಮಗಳನ್ನು ಟ್ಯೂಶನ್‌ಗೆ ಬಿಡಲೆಂದು ಮನೆಯಿಂದ ಹೊರಬರುತ್ತಿದ್ದಂತೆಯೇ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಅಪ್ಪ-ಮಗಳಿಬ್ಬ ರಿಗೂ ಗುಂಡು ತಗಲಿದ್ದು, ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಆದರೆ ಸೈಫುಲ್ಲಾ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಗಳು ಚೇತರಿಸಿಕೊಳ್ಳುತ್ತಿದ್ದಾಳೆ.

ಅಡಗು ತಾಣ ಪತ್ತೆ: ಅಮರನಾಥ ಯಾತ್ರೆಯ ಮೇಲೆ ದಾಳಿ ಬೆದರಿಕೆ ಹಾಕಿದ್ದ ಉಗ್ರ ಸಂಘಟನೆ ದಿ ರೆಸಿಸ್ಟೆನ್ಸ್‌ ಫ್ರಂಟ್‌ ಮತ್ತು ಲಷ್ಕರ್‌ ಅಡಗುತಾಣ ವೊಂದನ್ನು ಭದ್ರತಾ ಪಡೆಯು ಶ್ರೀನಗರದಲ್ಲಿ ಸೋಮವಾರ ಪತ್ತೆಹಚ್ಚಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next