Advertisement

ಜಾರ್ಖಂಡ್‌ BJPನಾಯಕನ ನಿಗೂಢ ಸಾವು

08:18 PM Apr 27, 2023 | Team Udayavani |

ರಾಂಚಿ: ಜಾರ್ಖಂಡ್‌ನ‌ ಪಲಮು ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಗುರುವಾರ ಬೆಳಗ್ಗೆ ನಾಯಕನ ಶವ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿಜೆಪಿ ಪರಿಶಿಷ್ಟ ಜಾತಿ ಘಟಕದ ಮನಾಲು ಮಂಡಲದ ಅಧ್ಯಕ್ಷರಾಗಿದ್ದ ಪ್ರಮೋದ್‌ ಸಿಂಗ್‌, ಬುಧವಾರ ಸಂಜೆ 5 ಗಂಟೆ ಸಮಯಕ್ಕೆ ಮನೆಯಿಂದ ಯಾರಬಳಿಯೋ ಹಣ ಪಡೆದುಕೊಳ್ಳಬೇಕಿದೆ ಎಂದು ತಿಳಿಸಿ ಹೊರಟಿದ್ದಾರೆ. ಬಳಿಕ ಇಡೀ ರಾತ್ರಿ ಹಿಂದಿರುಗಿಲ್ಲ. ಮರುದಿನ ಅಜ್ಞಾತ ಸ್ಥಳವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸಿಂಗ್‌ ಪತ್ತೆಯಾಗಿದ್ದಾರೆ.

Advertisement

ಆತ್ಮಹತ್ಯೆಯಂತೆ ತೋರುತ್ತಿರುವ ಪ್ರಕರಣವು ನಿಗೂಢವಾಗಿದ್ದು, ಕುಟುಂಬಸ್ಥರು ಇದು ಜಮೀನು ವಿಚಾರವಾಗಿ ನಡೆದಿರುವ ಕೊಲೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಸಿಂಗ್‌ ಕಾಣೆಯಾಗಿದ್ದಾರೆಂದು ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸಿಲ್ಲ. ಅವರು ಸರಿಯಾಗಿ ಸ್ಪಂದಿಸಿದ್ದಿದ್ದರೆ ಈ ದುರ್ಘ‌ಟನೆಯೇ ನಡೆಯುತ್ತಿಲಿಲ್ಲವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇತ್ತ ಪೊಲೀಸರು ತನಿಖೆ ಆರಂಭಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next