Advertisement

ಜೆಟ್‌ ಏರ್‌ವೇಸ್ ನೆರವಿಗೆ ಅಬುಧಾಬಿಯ ಎತಿಹಾದ್‌?

12:30 AM Jan 15, 2019 | Team Udayavani |

ಹೊಸದಿಲ್ಲಿ: ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಜೆಟ್‌ ಏರ್‌ವೇಸ್ ವೈಮಾನಿಕ ಕಂಪೆನಿಯ ನೆರವಿಗೆ ಅಬುಧಾಬಿ ಮೂಲದ ಎತಿಹಾದ್‌ ಸಂಸ್ಥೆ ಮುಂದೆ ಬಂದಿದೆ. 

Advertisement

ಜೆಟ್‌ ಏರ್‌ವೇಸ್ನಲ್ಲಿರುವ ತನ್ನ ಷೇರನ್ನು ದುಪ್ಪಟ್ಟುಗೊ ಳಿಸುವ, ಅಂದರೆ ಷೇರು ಪ್ರಮಾಣವನ್ನು ಶೇ.49ಕ್ಕೇರಿಸುವ ಮೂಲಕ ಜೆಟ್‌ ಅನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲಿದೆ.

ಪ್ರಸ್ತುತ ಎತಿಹಾದ್‌ ಜೆಟ್‌ ಏರ್‌ವೇಸ್ ನಲ್ಲಿ ಶೇ.24 ಷೇರುಗಳನ್ನು ಹೊಂದಿದೆ. ಈಗ ಎತಿಹಾದ್‌ ಷೇರು ಪ್ರಮಾಣ ಏರಿಸಿಕೊಂಡರೆ, ಜೆಟ್‌ ಏರ್‌ವೇಸ್ ಸ್ಥಾಪಕ ನರೇಶ್‌ ಗೋಯಲ್‌ ಅವರು ಹೊಂದಿರುವ ಷೇರು ಪ್ರಮಾಣ ಶೇ.51ರಿಂದ ಶೇ.20ಕ್ಕಿಳಿಯಲಿದೆ ಮತ್ತು ಅವರು ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಆದರೆ, ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಲು ಎತಿಹಾದ್‌ ಸಂಸ್ಥೆ ನಿರಾಕರಿಸಿದೆ.

ವಿಮಾನ ಟಿಕೆಟ್‌ ದರದಲ್ಲಿನ ಸ್ಪರ್ಧೆ ಹಾಗೂ ವೈಮಾನಿಕ ಇಂಧನ ದರದಲ್ಲಿನ ಹೆಚ್ಚಳದಿಂದಾಗಿ ಜೆಟ್‌ ಏರ್‌ವೇಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next