Advertisement

ಜೀಪು –ಆಮ್ನಿ ಢಿಕ್ಕಿ; ಕುಂದಾಪುರ ತಹಶೀಲ್ದಾರ್‌ ಪಾರು

04:00 AM Jul 19, 2017 | Harsha Rao |

ಕುಂದಾಪುರ: ಕಂಡೂÉರು ದೂಪದ ಕಟ್ಟೆ ಬಳಿ ಜೀಪು ಹಾಗೂ ಆಮ್ನಿ ಢಿಕ್ಕಿಯಾದ ಪರಿಣಾಮ ಜೀಪು ಪಲ್ಟಿಯಾಗಿ ಜೀಪಿನಲ್ಲಿದ್ದ ಕುಂದಾಪುರದ ತಹಶೀಲ್ದಾರ್‌ ಜಿ.ಎಂ.ಬೋರ್ಕರ್‌ ಹಾಗೂ ಸಿಬಂಧಿ ಹಾಗೂ ಮಾರುತಿ ಆಮ್ನಿಯ ಚಾಲಕ ರಾಯು ಡೇಸಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Advertisement

ತಹಶೀಲ್ದಾರರು ತಮ್ಮ ಸಿಬಂದಿಯೊಂದಿಗೆ ಸಿದ್ಧಾಪುರದಿಂದ ಕುಂದಾಪುರಕ್ಕೆ  ಬರುತ್ತಿದ್ದಾಗ ದೂಪದಕಟ್ಟೆಯ ಬಳಿ ಎದುರಿನಿಂದ ಬಂದ  ಮಾರುತಿ ಆಮ್ನಿಗೆ ಢಿಕ್ಕಿ ಹೊಡೆದಿತ್ತು. ಅಪಘಾತವನ್ನು ತಪ್ಪಿಸಲು ಪ್ರಯತ್ನಿಸಿದ್ದರಿಂದ ಜೀಪು ಪಲ್ಟಿಯಾಗಿದೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next